Tuesday, May 31, 2011

ಅಪ್ಪಿ V/s ಅಪ್ಪು

ತುಳು ಭಾಷೆಯಲ್ಲೊಂದು ಪ್ರೀತಿಯ ಮಿಲನದ ಕವನ...ಸ್ವಲ್ಪ ವಯಸ್ಸಾಗಿದೆ ನೀವೇನೂ ವರಿ ಮಾಡ್ಕೋಬೇಡಿ ಅವ್ರೇ ಅಡ್ಜೆಸ್ಟ್ ಮಾಡ್ಕೋತಾರೆ


ಅಪ್ಪಿ ನಿನ್ನ ತೆಲಿಕೆಗ್ ಮರ್ಲಾಯೆ ಈ ಎನ್ನ ಸಂಗಾತಿ
ಬಲ ಪೋಯಿ ಬಾಕ್ಯಾರ್ ಕಂಡೊಗು
ಅಪ್ಪಿ ದಿನ ನಿಲಿಕೆ ತೆಲಿಪಾವೆ ಜಿವ ನಿಲಿಕೆ ನಲಿಪಾವೆ
ಬಲ ಪಿದಡ್ ಪೊಸ ದಿನತ ಪಾಡಿಗ್...

ಈ ಮಸ್ತ್ ಪೊರ್ಲುಲ್ಲ ಯಾನೂಂತೆ ಕಪ್ಪು
ಬಣ್ಣ ದಾಯೆ ಪನ್ ಮೋಕೆದ ಕಡಲ್ ಗ್
ಈ ಆಲ ರಾಗ ಯಾನಾಪೆ ಲಯ
ಸೇರ್ ಗ ಮೋಕೆ ಪಾರ್ದನದ ಉಡಲ್ ಗ್

ಬಲ ಅಪ್ಪಿ ಸುಗ್ಗಿದ ಕೆಸರ್ ಗ್ ನೇಜಿ ಊರುಗ
ಉರುವಾಂಡ ಗೋಲಿದ ಬೂರುಡು ಅಂಚಿಂಚಿ ನೇಲ್ ಗ
ನೀಲಿ ಕುಂಟಲುಂಡು ಮಂಜಲ್ ತಾರೂಲುಂಡು
ತಡ ಬೊರ್ಚಿ ಬೇಗ ಬಲ ಪೂರ್ತಾಪುಂಡು

ಈ ಎನ್ನ ತಿಗಲೆಡ್ ಮೋಕೆ ಜಿಂಜಿ ಕಡಲ್
ಅಪ್ಪಿ ನಿನನೇ ಎನ್ನೂಂದುಲ್ಲೆ ದಿನ ರಾತ್ರೆ ಪಗೆಲ್
ಯಾನೂಂಜಿ ಪೂವಾಪೆ ಈ ಐಟ್ಟ್ ಅರಲ್
ನಿನ್ನ ದೊಂಬುದ ಬದ್ ಕ್ ಗ್ ಯಾನಾಪೆ ನಿರೆಲ್...

ಬೂತಾಯಿ ಮರ್ವಾಯಿ ಕರಾವಳಿಗ್ ಸೊಬಗತ್ತ
ಕೋಲ ಕೋರ್ದಟ್ಟ ತುಳು ನೆಲತ ಪೂರ್ಲತ್ತ
ನಿನ್ನ ಮೋನೆಡು ತೂಯೆ ತುಳು ನೆಲತ ತೆಲಿಕೆ
ಪರ್ಬ ಗೌಜಿಡ್ ತೆರಿಯೆ ತುಳು ನಾಡ ನಲಿಕೆ

ನಿನ್ನ ಸೆರಂಗ್ ಗ್ ನೆರಿಯಾಪೆ ಯಾನ್
ಮಟ್ಟೆಲ್ ಡ್ ತರೆ ದೀದ್ ಜಿವ ಬುಡೊಡ ಪನ್
ಅಪ್ಪಿ ಪಪ್ಪಿ ಕೊರ್ಪನ ಎಂಕೂಂಜಿ ಈ ದಿನೂನು ಮದಪಾಯೆ
ಈ ಇಜ್ಜಂದಿ ಬದ್ ಕ್ ನನ ಎಂಕ್ ದಾಯೆ...... ನನ ಎಂಕ್ ದಾಯೆ...........?


(ಹಾ ಅಪ್ಪಿ ಅಪ್ಪುಗು ಪಪ್ಪಿ ಕೂರೊಂದು ಉಲ್ಲಲ್ ಮಾತೆರ್ಲಾ ಕಣ್ಣ್ ಮುಚ್ಚಿಲೆ...ರಡ್ಡ್ ಅರಿ ದಕ್ಕ್ ಲೆ..)





ಫೋಟೋ ಕ್ರಪೆ: ರಾಜೇಶ್ ದೇವಾಡಿಗ

Wednesday, May 25, 2011

ಕನಸು**

ನಾನೂ ನನ್ನ ಕನಸು ಚಿತ್ರದ ನಂತರ ನನ್ನಲ್ಲೂ ಒಂದಿಷ್ಟು ಕನಸು......*

(ಸ್ವಲ್ಪ ಹಳೆಯದಾಗಿದೆ ಅಡ್ಜೆಸ್ಟ್ ಮಾಡ್ತೀರಲ್ವಾ....!)

ಕನ್ನಡ ಚಿತ್ರ ರಂಗಕ್ಕೊಂದು ಹೆಮ್ಮೆಯ ಚಿತ್ರ ನಾನು ನನ್ನ ಕನಸು, ಇಲ್ಲಿ ಭಾವನೆಗಳಿಗೊಂದು ಜಾಗವಿದೆ, ಇಂತಹ ಚಿತ್ರಗಳನ್ನು ಸ್ವತಹ ರೂಪಿಸುವುದು ಬಿಡಿ, ಪರಿವರ್ತಿಸುವುದರ ಕಡೆಗೂ ಯಾರೂ ಗಮನ ಹರಿಸುವುದಿಲ್ಲ, ಆದರೆ ಅಂತಹ ಒಂದು ಪ್ರಯತ್ನ ನಮ್ಮ ಪ್ರಕಾಶ್ ರೈ ಮಾಡಿದ್ದಾರೆ, ಜೀವನದ ಹಾದಿಯ ಕನಸುಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೆಲುಕು ಹಾಕುವ ಪ್ರಯತ್ನವನ್ನು ಪ್ರತಿಯೊಬ್ಬ ತಂದೆಗೂ ಒಂದು ಚಿತ್ರದ ಮೂಲಕ ಮಾಡಿ ಕೊಟ್ಟಿದ್ದಾರೆ, ಪ್ರಕಾಶ್ ರೈ ಅವರ ಜೊತೆ ರಮೇಶ್ ಅರವಿಂದ್ ಕೂಡಾ ಉತ್ತಮ ಸಾತ್ ನೀಡಿದ್ದಾರೆ,

ಪ್ರಕಾಶ್ ರೈ ನಿರ್ಮಾಣದ ನಾನು ನನ್ನ ಕನಸು ಚಿತ್ರ ನೊಡಿದ ಬಳಿಕ ನನ್ನಲ್ಲೆ ಓಂದು ರೀತಿಯ ಕನಸು ಮನೆ ಮಾಡಿದೆ, ಸಾಮಾನ್ಯವಾಗಿ ಯಾವ ಚಿತ್ರವೂ ಅಷ್ಟು ಬೇಗ ಹಿಡಿಸುವುದಿಲ್ಲವಾದರೂ ಈ ಚಿತ್ರ ನನ್ನ ಮನದೊಳಗೆ ಏನೋ ಮುಂದಿನ ಜೀವನವನ್ನು ನೆನಪಿಸಿದಂತಾಗಿದೆ, , ಇತ್ತೀಚೆಗೆ ಮದುವೆಯಾದ ನನ್ನ ಸ್ನೆಹಿತನ ಮಾತಿಗೆ ಮರುಳಾಗಿ ಸನ್ಯಾಸಿಯಾಗೋಣ ಅಂದು ಕೊಂಡಿದ್ದೆ ನಾನು ನನ್ನ ಕನಸು ಚಿತ್ರದ ನಂತರ ಸಂಸಾರ ಜೀವನದ ಕಾಮನಬಿಲ್ಲನ್ನು ಕಾಯುತ್ತಿದ್ದೇನೆ, ಅಪ್ಪನಾಗೋದು, ಒಂದು ಪುಟ್ಟ ಮಗು ಅದರ ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲುಗಳನ್ನು ಗಲ್ಲಕ್ಕೆ ತಾಗಿಸಿಕೊಂಡು ಮುದ್ದಾಡೋದು, ಆ ಮಗುವಿನ ಹಾಲು ಹೆಜ್ಜೆಯಲ್ಲಿ ಅದರ ಮುಗ್ದ ನಗು ಅಪ್ಪನ ಎಲ್ಲಾ ನೋವನ್ನೊ ಗಾಳಿಯಲ್ಲಿ ತೂರುತ್ತದೆ, ಆದರೂ ಜೀವನದಲ್ಲಿ ಸಿಹಿಯೊಡನೆ ಸ್ವಲ್ಪ ಕಹಿ ಇಲ್ಲವಾದರೆ ಸಿಹಿ ರೋಗ ಬರಬಹುದು...ಇಲ್ಲೂ ಅಷ್ಟೆ ಕನಸು (ಮಗಳು) ಪುಟ್ಟ ಹೆಜ್ಜೆ ಇಡೋವಾಗ ಮುದ್ದಾಡುತ್ತಾ ಶಾಲೆಯ ಅಂಗಳದವರೆಗೆ ಬಿಟ್ಟು ಟಾ ಟಾ ಮಾಡಿದಾಗ ಆಕೆ ಪುನಹ ಮರಳಿ ಬರುವವರೆಗೆ ಆಕೆಯ ನೆನಪು ಕಾಡುತ್ತಿರುತ್ತದೆ, ಕನಸು ದೊಡ್ದವಳಾದಾಗ ಸೈಕಲ್ ತೆಗಿಸಿ ಕೊಡುವುದು ಸ್ವಲ್ಪ ಆಲೋಚಿಸುವ ಕಡೆಗೆ ಗಮನ ಕೊಡುತ್ತದೆ. ಸೈಕಲ್ ನ ನಂತರ ಆಕೆಯ ಜೊತೆ ಬೆರೆತು ಟಾ ಟಾ ಮಾಡುವುದು ಮೋಡ ಸರಿಯುವಂತೆ ದೂರಾಗುತ್ತದೆ , ಆದರೂ ಮಗಳ ತುಟಿಯು ಪ್ಲೀಸ್ ಪಾ..ಅಂದಾಗ ತೆಗಿಸಿ ಕೊಡಲೇ ಬೇಕು ಅನಿಸುವುದು ಅವಳ ಆಸೆಯ ಪೂರೈಸುವಿಕೆಯ ಹಿಂದೆ ನನಗೋ ಸ್ವಲ್ಪ ಮಟ್ಟಿಗಿರುವ ಸಮಾದಾನ! ಮಗಳು ನನ್ನ ತೋಳಲ್ಲಿ ಕಾಲುಗಳಿಂದ ಗಲ್ಲವನ್ನು ಒದೆಯುತ್ತಾ ಇದ್ದಾಗ, ಅಲ್ಪ ಸ್ವಲ್ಪ ಅತ್ತಾಗ, ಕೊಂಚ ನಡೆದಾಗ, ಹಟ ಮಾಡಿದಾಗ ತಂದೆ ಎಂಬ ಹೆಮ್ಮೆಯ ಸಮಾದಾನ ಇರುತ್ತದೆ "ನಾನು ನನ್ನಲ್ಲಿ ಅರಳಿದ ಸುಕವೆಂಬ ಕನಸು" ಪುಡಿಯಾಗುವುದು ಆಕೆಗೆ ಮತ್ತೊಬ್ಬನಲ್ಲಿ ಪ್ರೀತಿ ಹತ್ತಿರವಾದಾಗ,

ಸಂಪೂರ್ಣ ಚಿತ್ರ ನೋಡಿದ ಬಳಿಕ ನನಗೆ ಅನಿಸಿದ್ದು ನಮ್ಮ ತಂದೆ ತಾಯಿ ಕೊಡಾ ನಮ್ಮ ಬಗ್ಗೆ ಎಷ್ಟೊಂದು ಕನಸುಗಳನ್ನು ಕಂಡಿದ್ದರು ಅನ್ನುವುದರ ಬಗ್ಗೆ! ನನ್ನ ಮೇಲೆ ನಾನು ಟೀ ಚೆಲ್ಲಿಕೊಂಡಾಗ ಅವರು ಕೊಟ್ಟ ಏಟಿನ ಹಿಂದೆ ಪ್ರೀತಿ ಇತ್ತು ಎಂಬೋದು ನನಗೆ ಅರಿವಾಗಲೇ ಇಲ್ಲ, ಇಂದು ಪ್ರಕಾಶ್ ರೈ ರವರ ನಾನು ನನ್ನ ಕನಸು ಚಿತ್ರ ನೋಡುತ್ತಿದ್ದಂತೆಯೇ ನಾನೊಮ್ಮೆ ಅಪ್ಪನಾಗಿ ಕನಸು ಕಂಡೆ, ನಾನು ಆಡಿದ ಜಾರು ಬಂಡಿ ಆಟ, ಮರ ಹತ್ತಿ ಕಾಲು ಮುರಿದು ಕೊಂಡಾಗ ಅತ್ತಿದ್ದು, ಒಂದು ರುಪಾಯಿ ಪೆಪ್ಪರ್ ಮಿಂಟ್ ಗೆ ರಾದ್ದಾಂತ ಮಾಡಿದ್ದು ,ಮೊದ ಮೊದಲು ಮೀಸೆ ಬೋಳಿಸಿಕೊಂಡಾಗ ನಾಚಿಕೆಯಾಗಿದ್ದು, ಇವುಗಳ ಮುದ ನನ್ನನ್ನು ಈಗ ಕಾಡುತ್ತಿದೆ, ಈ ಎಲ್ಲಾ ಸುಂದರ ನೆನಪುಗಳನ್ನು ನನಗೆ ಮರು ಮೆಲುಕು ಹಾಕಿಸಿದ್ದು ನಾನು ನನ್ನ ಕನಸು ಚಿತ್ರ , ಅಲ್ಲದೆ ಪ್ರತಿಯೊಬ್ಬ ಅಪ್ಪನ ಜವಾಬ್ದಾರಿ,ಆಸೆಯ ಮಿತಿಗಳನ್ನು ಪುನಹ ವಿಮರ್ಶಿಸುವ ಆಸಕ್ತಿಗೆ ಎಡೆ ಮಾಡಿ ಕೊಟ್ಟ ಪ್ರಕಾಶ್ ರೈ ಅವರಿಗೆ ನನ್ನ ಪುಟ್ಟ ಪುಟ್ಟ ಸಲಾಮ್...





Friday, May 20, 2011

ಕಣ್ಣೀರೇ ಕನಸಾಯಿತು.......
















ಅಂದಕೆ ಕರಗಲಿಲ್ಲ ಚಂದಕೆ ಮಣಿಯಲಿಲ್ಲ ಏನೊ ಬಯಸದೆ ಅದು ಹೇಗೆ ಬಂತೋ ಪ್ರೀತಿ

ನೆಟ್ಟ ತೋರಣದ ಮಡಿಲಲ್ಲಿ ದಿಟ್ಟ ಹಸಿರಿನ ಸೊಬಗು ಮರುಳು ಮಾಡಿತೇ ಮನವನು

ಪ್ರೀತಿ ವರ್ಣಿಸಲಾಗದು ಅವಳಂದ ಬಣ್ಣಿಸಲಾಗದು ಕನಸಿನ ಕಣ್ಣಿನ ರೆಪ್ಪೆ ಮುಚ್ಚುವುದೆಂತು

ಮುಂದವಳ ವರ್ಣಿಸಲು ಹೋಲಿಕೆಗಳೇ ಇರಲಿಲ್ಲ ಎಲ್ಲವೂ ಮುಗಿದಿತ್ತು ಪುಟದೊಳಗಿನ ಕವನದೊಳು

ಯಾರದೊ ಪ್ರೀತಿ ಕಂಡು ಹುಚ್ಚೆಂದ ಈ ಮನವು ಎನ್ನುದರದ ಪ್ರೀತಿಗೆ ಶರಣಾಯಿತು

ಆಕೆ ನಗುವಿನ ಗಾಳಿ ಎಸೆದಾಗ ಮೊದಲು ಸ್ನೇಹದೊಳಿದ್ದ ನಂಟು ಎಂಟಾಯಿತು

ನಾನೇನೂ ಮೊದಲಿಗನಲ್ಲ ಅವಳೇ ಮೊದಲಿಗಳು ನೀರ ಹಾರಿ ಹೊವೆತ್ತಿದಷ್ಟಕ್ಕೆ ಪೆಚ್ಚಾದಳು

ಹೆಸರೇನು ಸೌಖ್ಯವೇನು ಕೊನೆಗೆ ಖಾಲಿ ಇದೆಯೇ ಪ್ರೀತಿಯ ಮನೆ ಅಂದಾಗ ನಾ ಪೆಚ್ಚಾದೆ

ಇರುಳೆಲ್ಲಾ ರೆಪ್ಪೆ ಮುಚ್ಚಿ ಕಾಣುವ ಕನಸು ನಿದ್ದೆ ಬಾರದೆ ಕಾಡ ತೊಡಗಿತು

ಮುಂಜಾನೆ ದೇವರ ನೋಡುವ ಹೊರತು ಎನ್ನೀ ನಯನ ಎನ್ನವಳ ಬಿಂಬವನು ತುಂಬಿಸಿತ್ತು

ಬಡತನವ ಹೇಳಿದ್ದೆ ಮನದ ಸಿರಿತನವ ವರ್ಣಿಸಿದ್ದೆ ಗಳ್ಳನೆ ಸುರಿದ ಕಣ್ಣೀರಲ್ಲೇ ಉತ್ತರದ ಚಾಪಿತ್ತು

ಎದೆಗೆ ಮುಡಿ ಇಟ್ಟು ರೆಪ್ಪೆ ಮುಚ್ಚಿದಳು ಉಸಿರು ನಿಂತರೊ ಭಯವಿಲ್ಲ ಸುಂದರ ಸಾವ ಗೊಣಗಿದಳು

ಮುಳ್ಳ ಲೆಕ್ಕಿಸದೆ ಒಡೆಯ ಹೂವ ಕೀಳುವ ಕನವು! ಕಣ್ಣ ತುಂಬಿಸಿ ಎನ್ನವಳ ಬಿಗಿದು ಬಾಚಿತ್ತು

ಬಡತನಕೆ ಹೆದರಿದರೊ ಪ್ರೀತಿ ದೂಕಿತ್ತು ಇತ್ತಿಂದತ್ತ ಅತ್ತೆ ಮಾವನ ಮನೆಗೆ ಹೆಣ್ಣು ಕೇಳಲು

ಕುಳ್ಳಿರಿಸಿದರು ಪಾನೀಯ ಉಪಚರಿಸಿದರು ಪ್ರೀತಿ ವಿವರಿಸಲು ಎದೆ ಬಡಿತ ಉಸಿರ ಹಿಡಿದಿತ್ತು

ಎನ್ನವಳನೊ ಮುಂದಿರಿಸಿ ಬಗೆ ಬಗೆಯಾಗಿ ಮಗಳ ಮೇಲಿರುವ ಸಂಮ್ಮಂದದ ಸ್ವಚ್ಚತೆಯನು ಬಿಡಿಸಿದೆ

ಎನ್ನ ಬದುಕ ಹಿಂದೆಗಳೀಗೆ ಸಮ್ಮತಿ ಇಲ್ಲವಾದರೊ ಮಗಳ ಸುಖವೇ ನಮ್ಮ ಸುಖ ಎಂಬ ಮಾತು ಎನ್ನುಸಿರ ಸ್ಠಿರವಾಗಿಸಿತ್ತು

ಹರೆಯದಲ್ಲೇ ಪ್ರೇಮದ ಕನಸು ನನಸಾಯಿತು ಎನ್ನ ಹೆಜ್ಜೆಯಲಿ ಅವಳ ಹೆಜ್ಜೆ ಬೆರೆತಾಯಿತು

ಮಧುಮಂಚಕೆ ಬೀರಿತು ಬಿಡಿ ಕುಸುಮದ ಇಂಚರ ಗಿರಿ ಗಗನವೇ ಹಾಡಿದು ನಾದ ಸಪ್ತಸ್ವರ

ಮಲೆನಾಡಿಗೆ ಬಂದೆ ಸೌಂದರ್ಯ ಸವೆಯಲು ಪ್ರೇಮದ ಕವಿತೆಗೆ ನಾದವನು ಬೆರೆಸಲು

ದಿನ ಕಳೆದಂತೆ ಎನ್ನವಳ ಹಠ ಕಂಡು ಸುಕಿಸಿದ್ದೆ ನಗು ಕಂಡು ಸೋತಿದ್ದೆ

ವರ್ಷಗಳು ಮೊರಾಯಿತು, ಅತ್ತೆ ಮಾವ ಮಗಳ ಕಾಣಲು ತುಂಬಿದ ಗಾಡಿಯಿಂದಿಳಿದಾಯಿತು

ಆಸೆಯೇ ಇಲ್ಲದ ಅತ್ತೆಗೆ ಮೊಮ್ಮಗನ ತೊಗಿ ಮುದ್ದಾಡುವ ಹಂಬಲವಂತೆ

ಕನಸುಗಳೇ ಇರದ ಮಾವನಿಗೆ ಮೊಮ್ಮಗಳ ಕೊಂಡಾಡುವ ಬಯಕೆಯಂತೆ

ಒಂದಿರುಳ ಮಂದ ಬೆಳಕಿನೊಳು ಸೊಜಿಯು ಎನ್ನವಳ ಬೆರಳ ರಕ್ತವನು ಹೊರ ಕರೆದಿತ್ತು

ಕೈಯ್ಯ ಗಾಜನು ಬಿಟ್ಟು ಎನ್ನವಳ ಬೆರಳ ಬಾಯಲಿಟ್ಟು ಚುಂಬಿಸಿದೆ

ಜೋಡಿ ಪ್ರೀತಿಗೆ ಕರಗಿ ಅತ್ತೆ ಮಾವರ ಕಣ್ಣೀರು ನೆಲವ ಸೋಕಿ ಆಶೀರ್ವದಿಸಿತ್ತು

ಮಗಳ ನೊವನು ಅರಿತು ಎನ್ನೊಳು ಮಾತಿಗಿಳಿದ ಅತ್ತೆ ಮೊಮ್ಮಗನ ಅಳುವಿಗೆ ದಿನ ಕೇಳಿದಳು

ಎಳೆದೇ ಹೋದರು ದವಾಖಾನೆಗೆ ಕಣ್ಣೀರೊಳು ಅವಿತಿಟ್ಟೆ ಕೆಲವೊಂದು ಸತ್ಯಗಳ ಎನ್ನ ಉದರದೊಳಗೆ

ಮನೆಯವರೆಲ್ಲ ಸೇರಿ ಬಗೆಬಗೆಯಾಗಿ ನೋಯಿಸಿದರು ಛಲಕೆ ಶರಣಾಗಿ ಎನ್ನುದರ ಬಿಚ್ಚಿದೆ

ನಾವಿಬ್ಬರೊ ಪ್ರೇಮಿಗಳಷ್ಟೆ ಪ್ರೀತಿ ಹಂಚಿದೆವು ದೇಹ ಹಂಚಲಿಲ್ಲ

ಮುತ್ತಿ ಮುದ್ದಾಡಿದ್ದರೊ ಪ್ರೀತಿ ಕಂಪಿಸಿತ್ತು ದೇಹ ಕಂಪಿಸಲಿಲ್ಲ

ಮಗು ಬೇಕೆಂಬ ಹಂಬಲ ನಮಗೆ ನಿಮಗಿದ್ದರೊ ಆ ವಿದಿಗೆ ಇರಬೇಕಲ್ಲ

ನಾ ಮುಚ್ಚಿಟ್ಟ ಸತ್ಯವಿಷ್ಟೆ ಎನ್ನವಳು ಇನ್ನಿರುವುದು ಎರಡು ಮಾಸಗಳ ಕಾಲ

ಈ ಎರಡು ಮಾಸಗಳು ಎನಗೆ ನೊರು ವರ್ಷಗಳು ನಾ ಇನ್ನೊ ಪ್ರೀತಿಸಬೆಕು ಕಾಲ ಬೆರಗಾಗುವಷ್ಟು

ಎನ್ನವಳ ಕೊನೆಯು ಅವಳ ಮನಕೆ ತಿಳಿದಿಲ್ಲ ಬಿತ್ತದಿರಿ ಆಸೆಗಳ ಬಿಳಿ ಮಂಜನು

ಇನ್ನೊ ಮುಂದೆ ಎನಗೆ ವಿವರಿಸಲು ನಾಲಗೆ ತೆವಳುತಿಲ್ಲ ತುಟಿಗಳು ತೇವವಿಲ್ಲ

ನಾ ನತದ್ರುಷ್ಟನೊ ಬದುಕು ಬಣ್ಣದ ಖಡ್ಗವೋ ಅದರ ಹರಿತಕೆ ನಾ ಚೊರು ಚೊರಾದೆ

ನೆನಪುಗಳ ಕಹಿಯಲಿ ದೇಹ ಕಲ್ಲಾದಾಗ ಅತ್ತೆ ಮಾವರ ಹಣೆಯು ಎನ್ನ ಪಾದವ ಮುದ್ದಿಸಿತ್ತು

ಹುಚ್ಚುತನಕೆ ಆಡಿ ಅವರಿಬ್ಬರ ದೇಹವ ಎನ್ನ ಕರಗಳು ಅಪ್ಪಿ ಬೆಚ್ಚಗೆ ಬಂದಿಸಿತ್ತು

ಅದು ಕೊನೆಯ ದಿನ ಎನ್ನವಳೀಗೆ ಎನ್ನ ಬಾಚಿ ಮುದ್ದಾಡುವ ತುಮುಲವಂತೆ

ಮತ್ತೆ ಮುಡಿಯ ಎನ್ನೆದೆಗೆ ಒರಗಿಸಿ ರೆಪ್ಪೆ ಮುಚ್ಚಿದಳು

ಕಾದೇ ಕುಳಿತೆ ಮತ್ತೆ ರೆಪ್ಪೆ ಕಂಪಿಸುವುದೆ ಪ್ರೀತಿ ಎನ್ನರಸುವುದೇ................................................









































Thursday, April 21, 2011








ಗೊಂದಲದೊಳಗೊಂದು ಹಂಬಲ

ಬರೆಯಲೇಬೇಕೆಂದು ಹೊರಟೆ
ಏನು ಬರೆಯಲಿ ಯಾರ ಬರೆಯಲಿ?
ಸ್ವಲ್ಪ ಹೊಸದು ಬೇಕಿತ್ತು,ಕಾಣುವುದೆಲ್ಲಾ ಹಳೆಯದಾಗಿತ್ತು
ಹೆಣ್ಣು,ಹೊಣ್ಣು,ಮಣ್ಣು ಮನ ಗೊಂದಲದಲ್ಲಿತ್ತು..


ಮೊದಲ ಕವನ ಚಿಗುರಿದಾಗ
ಕಾಲ ಬುಡದಲ್ಲಿ ಗೀಚಿ ಹರಿದು ಎಸೆದ ಕಸವಿತ್ತು
ಚಿಗುರಿದ ಕವನ ಅರಳುವ ಹೊತ್ತು
ಮನ ಸುಂದರ ಪದಗಳ ಹೊಂದಿಸುವ ಗೊಂದಲದಲ್ಲಿತ್ತು


ಚುಕ್ಕೆ ಚಿತ್ತಾರಗಳ ವರ್ಣಿಸಲೇ
ಹಕ್ಕಿ ಆಗಸವನೊ ಬೆರೆಸಲೇ
ಸುತ್ತ ಮುತ್ತ ಕಾಡು ಕಡಲು ಕೇವಲ ಚಿತ್ರವೇ?
ವಿಚಿತ್ರ ನಾಡಿನ ಹಗಲು - ಇರುಳಿನಲಿ
ಕಪ್ಪು ಬಿಳುಪಿನ ಬಾಳೊಂದು ಬಣ್ಣವೇ?


ಜೀವಿಗಳಿಗಿರುವ ಕಿಚ್ಚು ಮತ್ಸರ?
ಗಾಳಿ-ನೀರಿಗೇಕಿಲ್ಲ?
ಜೀವಿಗಳನು ಚುಚ್ಚುವ ಕುಸುಮದ ಮುಳ್ಳು
ದುಂಬಿಯನೇಕೆ ಚುಚ್ಚಲಿಲ್ಲ?
ನಿನ್ನೆಯ ಪುಠಗಳು ತುಂಬಿತ್ತು
ನಾಳೆಯದೇಕೆ ಖಾಲಿ ಖಾಲಿ.............?







Thursday, March 10, 2011

ಸಾಗರದ ಅಲೆಯಲ್ಲಿ ನನ್ನವಳ ಕಂಡ ಕನಸು....!

ಕಲ್ಪನೆಯ ಮೋಡದಲ್ಲಿ

ಸುಂದರ ಬಾಲ ಬಾಲ್ಯದಲ್ಲಿ ಈಸಿದ್ದೇನು? ಈಸಿ ಜಯಿಸಿದ್ದೇನು? ಬರೀ ನಾಟಕೀಯ ತುಣುಕುಗಳ ನೆನಪಷ್ಟೆ! ಪ್ರೀತಿಯಿಂದ ಹಡೆದಳು ನಮ್ಮವ್ವ, ಜೋಗುಳ, ಕಂದಮ್ಮ, ಇಂತೆಲ್ಲ ಕವನ ಕಾದಂಬರಿಗಳಿಂದ ಬಾಲ್ಯವನ್ನು ಮುದ್ದಿಸಿದ್ದೆಷ್ಟೋ ಅರಿಯೆ! ಮಗು ನಕ್ಕಾಗ,ಕೆನ್ನೆ ಕೆಂಪಿದ್ದಾಗ, ಮೆಲ್ಲನೆ ಅಮ್ಮಾ ಎಂದು ಮೆಲ್ಲಿದಾಗ ಅಮ್ಮನ ಆನಂದವೆಷ್ಟೋ ವರ್ಣಿಸಲಾಗದು, ಸ್ವಲ್ಪ ತುಂಟಾಟಿಕೆ ಮಿತಿ ಮೀರಿದಾಗ ಆಕೆ ಪ್ರೀತಿಯಿಂದ ಅಬ್ಬರಿಸುವುದರಲ್ಲಿ ತಪ್ಪೇನಿದೆ ಅಲ್ವೇ..? ಆದರೊ ಆ ಪ್ರೀತಿಯ ಹೊಡೆತವನ್ನು ಪ್ರೀತಿಯಿಂದಲೇ ಸಹಿಸುವವರಾರು? ಮೀಸೆ ಬಂದಾಗ ಲೋಕ ಕಾಣುವುದಿಲ್ಲ ಅನ್ನೋದು ಸುಳ್ಳಲ್ಲ ಅಲ್ಲವೇ? ಅಮ್ಮ ಮುದ್ದಿಸಿದ್ದು, ಅಮ್ಮನ ಮುತ್ತನ್ನು ಮರೆತಿದ್ದು ಇದೆಲ್ಲಾ ಮಾನವ ಹೆಚ್ಚು ಸುಖವನ್ನು ಪಡೆಯಲು ಹೊರಟಾಗ ಅವನ ಮನದಲ್ಲಿ ಮೊಡುವ ಕನಸಿನ ಕಾದಂಬರಿ. ಅಮ್ಮನಿಂದ ಕೈ ತುತ್ತು ತಿನ್ನುವ ಹೊತ್ತು ಕಳೆದರೆ ಸಾಕು ದೇಶ ಸುತ್ತಿ ಕೋಶ ಓದುವ ಬಯಕೆ, ಕಣ್ಣು ಮನಸ್ಸು ಇಷ್ಟ ಪಟ್ಟಿದ್ದನ್ನು ಕೊಂಡುಕೊಳ್ಳುವ ಆಸೆ, ನನ್ನವಳ ಬಗ್ಗೆ ನೆನೆದಾಗ ಹೆಣ್ಣು ತಪ್ಪಿಲ್ಲ, ತಪ್ಪು ಎನ್ನುವ ದಾರವನ್ನು ಗಂಡು ಹೆಣೆದಿಲ್ಲ, ಎಲ್ಲವನ್ನೊ ಕಾಲ ಸಂದರ್ಭಗಳೆಂಬ ಸಹಜತೆ ಅಲ್ಲೋಲ ಕಲ್ಲೋಲವಾಗಿಸಿದ್ದು ಅನಿಸುತ್ತಿದೆ!

ನನ್ನವಳು ಅಂತಹ ಹಾಲು ವಯಸ್ಸಿನಲ್ಲೂ ಮುಂಜಾನೆ ಎದ್ದು, ಸಂಧ್ಯಾವಂದನೆ ಮುಗಿಸಿ,ನಮಿಸಿ, ಸುಂದರ ಕನಸುಗಳ ತಂತಿಯನ್ನು ಮೀಟಿ ಆನಂದಿಸುತ್ತಿದ್ದಳು, ಮುಂಜಾನೆಯ ಸವಿ ತಂಗಾಳಿ ಮೈಗೆ ಸೋಕುವುದನ್ನು ಅನುಭವಿಸುತ್ತಾ ಆನುಭವವನ್ನು ಅಮ್ಮನಲ್ಲಿ ಹಂಚುತ್ತಾ, ಕಮಲದಿಂದ ದುಂಬಿ ಮಕರಂದವನ್ನು ಹೀರುವ ಸೊಬಗನ್ನು ಮನದಲ್ಲೇ ಹಾಡುತ್ತಿದ್ದಳು. ಅವಳಿಗೊ ದುಂಬಿಯಾಗುವ ಬಯಕೆಯಂತೆ, ಸಂಜೆಯ ಕೆಂಪುಬಣ್ಣದ ಆಗಸದ ತೇರಿನಲ್ಲಿ ಸಾಲು ಸಾಲಾಗಿ ಹಾರುವ ಹಕ್ಕಿಗಳ ದಿಂಡನ್ನು ನೋಡು ನೋಡುತ್ತಾ, ನನಗೊ ಹಕ್ಕಿಯಾಗಬಾರದಿತ್ತೇ?, ನಾನು ಅವುಗಳ ಜೊತೆ ಹಾರಬಾರದಿತ್ತೆ ಅನ್ನೋ ಕನಸುಗಳನ್ನು ಬಿತ್ತುತ್ತಿದ್ದಳು. ಹೀಗಿದ್ದ ನನ್ನಾಕೆ ಮೊದಲು ಮರೆತಿದ್ದು ಅಮ್ಮನನ್ನು! ನಂತರ ಮರೆತಿದ್ದು ನನ್ನನ್ನು!

ಪ್ರೀತಿಯ ಮಹಲ್ ಕಟ್ಟಲು ಎಷ್ಟೋ ವರ್ಷಗಳು ಬೇಕು,ಅದೇ ಮಹಲ್ ಒಡೆದು ಹೋಗಲು ಒಂದು ನಿಮಿಷ ಸಾಕು! ಪ್ರೀತಿ ಹುಟ್ಟು ಹಾಕಲು ಕೆಲವೇ ಕವಲುಗಳಿದ್ದರೆ, ಒಡೆದು ಹೋಗಲು ನೊರಾರು ಕವಲುಗಳು ! ಹಾಗೆಂದು ನಾ ಕಟ್ಟಿದ ಪ್ರೀತಿಯ ಸೌಧ ಯಾರೋ,ಹೇಗೋ ಎಂಬ ಒತ್ತಾಯಕ್ಕೆ ರಚನೆಯಾಗಿಲ್ಲ, ಅಲ್ಲಿ ಸುಂದರ ಭಾವನೆಗಳಿತ್ತು,ಸುಂದರ ಕನಸುಗಳಿತ್ತು,ಬಾಲ್ಯದ ಬದುಕಿನ ನೆನಪುಗಳಿತ್ತು,ಪುಟ್ಟ ಪುಟ್ಟ ಹೆಜ್ಜೆಯ ಗುರುತುಗಳಿತ್ತು! ನನ್ನವಳು ನೆಲ ಸೋಕುವ ದಾವಣಿಯ ಅಂಚನ್ನು ಎತ್ತಿ ಹಿಡಿದು ಕುಂಟೆ ಬಿಲ್ಲೆ ಆಡುವಾಗ ಎಡವಿ ಬಿದ್ದಳು, ನಾನು ಅಡಿಕೆ ಗರಿಯಲ್ಲಿ ಎಳೆದಾಗ ಜಾರಿ ಬಿದ್ದಳು, ನೆಲ್ಲಿ ಕಾಯಿ ಕೀಳುವಾಗ ಕೆಳಬಿದ್ದಳು, ಎಲ್ಲಿ, ಹೇಗೆ ಬಿದ್ದರೊ ಸಹಿಸಲಾಗದ ನೋವಾಗಿತ್ತು! ಇನ್ನು ನನ್ನಾಕೆ ತನ್ನ ಹರೆಯದ ಬದುಕಲ್ಲೇ ಎಡವಿದಾಗ, ಬಾಲ್ಯದ ನಂತರವೊ ಪರರೊಡನೆ ಬೆತ್ತಲಾದಾಗ ನಾನೇಕೆ ಮೌನವಾದೆ? ನನ್ನ ನಯನಗಳೇಕೆ ಕಣ್ಣೀರನ್ನು ಹರಿಯ ಬಿಡಲಿಲ್ಲ,ದೇಹವೇಕೆ ಕಲ್ಲಾಯಿತು? ಆಕೆ ಆ ರೀತಿ ವರ್ತಿಸುವ ಕಾರಣವಾದರೊ ಏನು? ನಾನು ನನ್ನ ಕನಸುಗಳು ಸುಳ್ಳೆ? ಭಾವನೆಗಳು ಸುಳ್ಳೆ? ನನ್ನವಳು ನನಗಾಗಿ ಸುರಿದ ಪ್ರೀತಿ ತುಂಬಿದ ಕಣ್ಣೀರು ಸುಳ್ಳೆ?

ಬಾಳ ಮೊದಲ ಬೇಟಿಯಲ್ಲಿ ನನ್ನವಳನ್ನು ಪ್ರೀತಿಯ ಮಂದಿರದಲ್ಲಿ ಕಂಡೆ, ಬಾಳ ಮಗದೊಂದು ಭೇಟಿಯಲ್ಲಿ ನನ್ನವಳನ್ನು ಕಂಡಾಗ ಆಕೆಯ ಕಣ್ಣುಗಳು ಬಾಡಿತ್ತು,ತುಟಿ ಒಣಗಿತ್ತು, ಗಲ್ಲ ನಗುವಿನ ಗಾಳಿ ಸೋಕದೆ ಕುಂದಿತ್ತು ಅಂದರೆ ಅದಾಗಲೇ ಆಕೆಯ ದೇಹವೆಂಬ ಆಸ್ತಿಯ ಪತ್ರ ಮತ್ತೊಬ್ಬರದ್ದಾಗಿತ್ತು, ಮತ್ತೆ ನನ್ನವಳ ಭೇಟಿ ಎಲ್ಲಿ ಹೇಗಾಗುತ್ತೋ ತಿಳಿದಿರಲಿಲ್ಲ.ಆದರೊ ಎದೆಯೊಳಗಿನ ಪ್ರೀತಿ ಕುಂದಲೇ ಇಲ್ಲ,
ಮುಂದೇನಾಯಿತು? ಪ್ರೀತಿ ಬೇಡವೆನಿಸಿತೇ? ಬದುಕು ಸಾಕೆನಿಸಿತೇ? ನಾನು ಎಲ್ಲವನ್ನೊ ಸಹಿಸಲು ಉಸಿರುಹಿಡಿಯುವ ಪ್ರಯತ್ನದಲ್ಲಿದ್ದಾಗ ಎಲ್ಲಾ ನೋವು,ದುಗುಡ,ದುಮ್ಮಾನಗಳನ್ನು ಕಾಲವೆಂಬ ಕವಡೆ ಮಗುಚಿ ಹಾಕಿತ್ತು, ಕೆಲವೊಂದು ಆಕಸ್ಮಿಕ ಅನುಭವಗಳಿಂದ ಸಮುದ್ರದ ಅಲೆಗಳು ಪ್ರತೀ ನಿಮಿಷಕ್ಕೊ ದಡವನ್ನು ತಟ್ಟುವ ಕಾರಣದ ಅನುಭವವಾಯಿತು. ದಿನಗಳು ಉರುಳಿತ್ತು, ಕತ್ತಲೆಯ ಕಾವಿನಲ್ಲಿ ಒಂದೊಮ್ಮೆ ಮೈ ಬೆವರಿತ್ತು, ನೆನಪುಗಳು ಚುಚ್ಚುವಾಗ ಮತ್ತೆ ಮತ್ತೆಗೆ ಅದೇನೊ ಹೊಸತೆನಿಸಲಿಲ್ಲ ಎಲ್ಲವೊ ಅಭ್ಯಾಸ ಅನ್ನುವ ತಾಳಕ್ಕೆ ಕುಣಿಯುವ ಗೊಂಬೆಯಾಯಿತು.ಸಹೋದರಿಯೊ ನನ್ನ ಮುರುಕಲು ಮನಕ್ಕೆ ಬುದ್ದಿಮಾತುಗಳನ್ನು ಚಡಪಡಿಸುತ್ತಾ ಕೆಂಪಾಗಿದ್ದಳು,

ಅದೊಂದು ದಿನ ಸಾಗರದ ಅಂಚಿನಲ್ಲಿ ಕೂತಾಗ ಬಾನಂಚಿನಲ್ಲಿ ಸುಂದರ ಸಂಜೆಯ ಕಂಪನ್ನು ಸವಿಯುತ್ತಾ, ಮೋಡಗಳು ಬಾನನ್ನು ತಬ್ಬಿ ಆಲಂಗಿಸಿದಾಗ, ಅಲೆಗಳು ನನ್ನ ಪಾದದ ವರೆಗೊ ಬಂದು ಹಿಂದೆ ಸರಿದಾಗ ನನ್ನವಳ ನೆನಪಾಗದಿರಲಿಲ್ಲ ಬಾಳಿನಲ್ಲಿ ಎರಡು ಬೇಟಿಗಳನ್ನೊ ಮುಗಿಸಿ ಮೊರನೆಯದೆಂತೋ ಎಂದು ದಡಕ್ಕೆ ಬಾಗಿದಾಗ, ಅಲ್ಲಿದ್ದ ಕೆಲವೊಬ್ಬರು ಸಾಗರ ತೀರದಲ್ಲಿ ಗುಂಪಾಗಿದ್ದರು, ಸಹೋದರಿಯೊ ಕೊಡಾ ಯಾರೋ ನಮಗೇಕೆ? ಶುದ್ದ ಮನಸ್ಸುಗಳ ಪ್ರೀತಿಗೆ ಅಂತ್ಯ ಈ ರೀತಿಯೇ ಕಹಿಯಾಗಿರುತ್ತದೆ! ಯಾವುದೋ ಹುಡುಗಿ ಕನಸುಗಳೆಂಬ ನೀರಿನ ಹಾಸಿಗೆಯಲ್ಲಿ ತೇಲುತ್ತಿದ್ದಾಳೆ ಅಂದಳು, ಎಲ್ಲರ ಕೈಗಳೊ ಕೂಡಾ ಕೊಳೆತ ಗಂಧಕ್ಕೆ ನಾಸಿಕವನ್ನು ಮುಚ್ಚಿಸಿತ್ತು,,! ನಾ ಮೆಲ್ಲನೆ ನಡೆದು ತಲೆಯೆತ್ತಿದಾಗ.......
ಸಹೋದರಿಯ ಅದು ನಿನ್ನವಳಲ್ಲ ಅನ್ನೊ ಮಾತಿಗೆ ಎನ್ನ ಮನದ ಪ್ರೀತಿಯ ಮಂದಿರ ಅದು ಎನ್ನವಳೇ ಎಂದು ಸಾರಿ ಸಾರಿ ಹೇಳಿತ್ತು, ಕಾಲ ಉರುಳಿತ್ತು,ಬಾಳು ಮುಗಿದಿತ್ತು, ಅಂದಲ್ಲಿ ಬಾಳು ಬೆತ್ತಲೆ ನಡಿಗೆ, ಸಂಜೆ ಕತ್ತಲೆಡೆಗೆ....

ಲೋಕು ಕುಡ್ಲ..

(lokukudla@gmail.com)
* * * *















Friday, February 18, 2011

ಭಾವನೆಯ ಮೊಡದಲ್ಲಿ ಕೊನೆಯಿಲ್ಲದ ಕವನ..!


(ನಾ ಬರೆದು ಸೊರಗಿ ಕರಗಿ ಮತ್ತೆ ಬರೆದರೊ ಅದು ಅವಳ ನೆನಪಿನೊಳಗಿನ ಹೊಸ ನೆವನದ ಕವನ......................!)



ಅದು ಅವಳ ಮುಗುಳು ನಗೆ
ಬಾಚಿ ಗೋರುವ ತೆವಲೆನಗೆ.....
ಅಯ್ಯೊ ಅವಳು ನಡೆದರೆ ಸೊಂಟ ಬಳ್ಳಿಯಂತೆ
ಬೆಳ್ಳಿಯಂತೆ ಅವಳ ನಯವಾದ ಪಾದ....

ಮಿಟುಕಿ ಮಿಟುಕಿ ಮಿಂಚುವ ಮಿಂಚುಳ್ಳಿ ಅವಳ ಕಣ್ಣು
ಬೆನ್ನು ತಳುಕಿ ಬಳುಕಿ ಬಾಗಿದ ಬಾಳೆಯಂತೆ
ಮಲ್ಲಿಗೆ ಮುಡಿದರೆ ಸಾಕು ನನಗೆ ಕಿವಿಅಂಚು ಮೊಸುವ ಆಸೆ
ತೆಳ್ಳಗೆ ನಡೆದರೆ ಸಾಕು ಸೊಂಟಕ್ಕೆ ತಾಗಿ ತೊಗುವ ಕೇಶ....

ಪಾದದ ನೆರಳು ನೇರಳೆಯ ಮೈಯ್ಯಂತೆ ನೀಲಿ
ತೇಲಿ ತುಳುಕುವ ಮೈಯ್ಯೆಲ್ಲಾ ಚುಕ್ಕೆ ಇಟ್ಟ ರಂಗೋಲಿ
ಅಂದದೋಕುಳಿ ಕಾಲಿ ಕಾಲಿ ಕೆನ್ನೆಗೆ ಸ್ವಲ್ಪ ನಗುವಿನ ಗಾಳಿ
ಸೀಳಿ ಉಕ್ಕುವ ಅವಳ ಅಂದದ ಅಲೆಗಳ ದಾಳಿ...

ಅಯ್ಯೊ ನನ್ನವಳು ಕೋಗಿಲೆಯಾಗಿ ಹಾಡಿದಾಗ
ನಾನು ಆಸರೆಯಾಗಿ ಮಾಮರವಾಗಬಾರದಿತ್ತೆ..?
ಅಯ್ಯೊ ನನ್ನವಳು ಹೊವಾಗಿ ಅರಳುವಾಗ
ನಾನು ಮುಳ್ಳಾಗಿ ಬೇಲಿಯಾಗಬಾರದಿತ್ತೇ..?

ಅವಳು ಕುಣಿದರೆ ಸಾಕು ಆಗಸವೇ ರಂಗವಾದಂತ್ತಿತ್ತು
ಅವಳ ತೆವಳುವ ಕಂಗಳು ತೇಲುವ ಮೋಡದಂತ್ತಿತ್ತು
ತುಟಿ ಚಟಪಟವಾದಾಗ ಅಲೆಗಳೇ ತಬ್ಬಿದಂತ್ತಿತ್ತು..
ಬ್ರಂದಾವನದ ಸೊಬಗಿನೊಳು ಅವಳು ಸರ್ಗದಾ ಅಪ್ಸರೆ...

ಅಯ್ಯೊ ನನಗಿಲ್ಲವೇ ನನ್ನವಳ ಮನದ ಮಂದಿರದ ನೆರಳು..
ಕೇಶದಿಂದ ಹಿಡಿದು.... ಅವಳ ಲಿಪ್ ಸ್ಟಿಕ್ ಕೊಡಾ ಗೋಡೌನ್ನಲ್ಲಿ ಭದ್ರವಾಗಿದೆ..
ಎಲ್ಲವೊ ಸುಭದ್ರವಾಗಿದ್ದರೊ...ಮನದಲ್ಲಿ ನನ್ನವಲು ಕಳವಾದಂತಿದೆ..
ನಾನು ಕಟ್ಟಿದ ಪ್ರೇಮದ ಉಸಿರು ನಿಂತಂತಿದೆ..ಕನಸು ಕೊಲೆಯಾದಂತಿದೆ..

ಸೌಂದರ್ಯಕ್ಕೆ ಮರುಳಾಗಿದ್ದು ಮೊರ್ಖತನವೇ...?
ಕಾಣುವ ಅಂದ ವರ್ಣಿಸಿದ್ದು ಹುಚ್ಚುತನವೇ..?
ನಿನಗೆ ಕರುಳಿಲ್ಲವೇ ..ನನಗೆ ನೀ ಎಂದು ಸಿಗುವೆ..?
ತಳ್ಳದಿರು...ಇಲ್ಲವೆನ್ನದಿರು...ನಿನಗಾಗಿ ಶತ ಸಂವತ್ಸರ ಕಾಯುವೆ..!
ಹೇ ನನ್ನ ಕನಸಿನ ರಾಣಿ ನಿನಗೆ ನನ್ನಲ್ಲಿ ಮುನಿಸು ತರವೇ...?????







Tuesday, February 15, 2011

ನೀನು ಬೆಚ್ಚಗಿದ್ದೆ,ನಾನು ಬೆಚ್ಚಗಿರಿಸಿ ಹುಚ್ಚನಾದೆ....!

ಎಲ್ಲೋ ಇತ್ತು ಬಣ್ಣಗಳ ಚಿತ್ತಾರ, ಹೇಗೋ ಇತ್ತು ಚಿತ್ತಾರದ ಅವತಾರ, ಕವನ ಒಂದೇ ಎರಡೇ? ಎಲ್ಲದರಲ್ಲೊ ನಿನ್ನ ನೆನಪುಗಳ ಸಾಲು, ನಿನ್ನ ಹೊಳೆಯುವ ಕಣ್ಣು, ನಿನ್ನ ಬಣ್ಣದ ದೇಹ, ವರ್ಣಿಸಿದಷ್ಟೊ ಸಾಲದು, ಹೇಗಿತ್ತು ಮೊದಲ ದಿನದ ಬೇಟಿ? ಒಮ್ಮೆ ನೆನಪಿಸಿಕೋ ನೀನು ಕೊಡೆ ಇದ್ದರೊ ಅದರ ತೊತುಗಳಿಂದ ತೊಟ್ಟಿಕ್ಕುವ ಹನಿಗೆ ಒದ್ದೆಯಾದಾಗ ನಾನು ನನ್ನ ರೈನ್ ಕೋಟ್ ಕೊಟ್ಟಿದ್ದು, ನೀನು ನೀರ ಹನಿಗಳ ನೋಡು ನೋಡುತ್ತಲೇ ಆನಂದಿಸಿದೆ, ನಾನು ಹನಿಗಳಿಂದ ನೆನೆ ನೆನೆದು ಆನಂದಿಸಿದೆ, ನಿನಗೆ ಆನಂದದ ಬೆಸುಗೆ ನನಗೆ ಸ್ವಲ್ಪ ಜ್ವರ ಬಂದಿತ್ತು ಅಷ್ಟೆ, ನೋವಿನಲ್ಲೊ ನಿನ್ನ ನಗು ನೆನಪಿಸಿದಾಗ ಮೈ ಜುಮ್ಮೆಂದಿತ್ತು, ಸುಕ ತುಳುಕುತ್ತಿತ್ತು ಎಲ್ಲಾ ಆ ನೆನಪುಗಳ ಕನಸಿನಿಂದಷ್ಟೆ! ಬಾಲ್ಯದಿಂದಲೊ ಜೊತೆಗಿದ್ದೆ, ಆ ಆಟ, ಆ ತುಂಟತನ ನನ್ನಲ್ಲೊ ಗೀಜಗನ ಗೊಡಾಗಿತ್ತು. ನೀನು ನವಿಲು ಗರಿ ಬೇಕು ಎಂದು ಹಟಮಾಡಿದ ಆ ವಯಸ್ಸು , ಆ ಸಮಯ ಮಲ್ಲಿಗೆಯ ತೋಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸಿದಂತಿತ್ತು, ನಿನಗೊ ಸ್ವಲ್ಪ ವಯಸ್ಸಾದಾಗ , ಮಾತಿನ ವರಸೆಗಳೇ ಬದಲಾಗಿತ್ತು, ಯಾರೋ ನಿನ್ನನ್ನು ಮುಟ್ಟಿದಾಗ ಅದರ ಭಾವನೆಯನ್ನು ನಾನು ಅರ್ಥೈಸಲೇ ಇಲ್ಲ, ಅದೇನೊ ನನ್ನ ದೇಹಗಳೇ ಕಂಪಿಸಿತ್ತು , ಕಿಚ್ಚೋ, ಮತ್ಸರವೋ ಗೊತ್ತಿಲ್ಲ ನೀನು ನನ್ನ ಆಸ್ತಿ ಅನ್ನುವುದಷ್ಟೆ ಆ ಕಂಪನದ ಸಾರಾಂಶ. ಅಡಿಕೆಯ ಗರಿಯಲ್ಲಿ ನಿನ್ನ ಎಳೆದುಕೊಂಡು ಹೋದಾಗ ನಾನು ಬಿದ್ದರೊ ನಿನಗೆ ನಗು ತಡೆಯಲಾಗಲಿಲ್ಲ, ನನ್ನ ಕೈ ಅಂಚಿನಲ್ಲಿ ಸ್ವಲ್ಪ ರಕ್ತ ಸೋರಿದಾಗ ನೀ ಅತ್ತಿದ್ದು ನಾ ಮರೆತಿಲ್ಲ, ಎಟುಕದ ನೆಲ್ಲಿಕಾಯಿಗೆ ಹೆಗಲ ಮೇಲೆ ಕೊರಿಸಿ ಎಟುಕಿಸಿದ್ದೆ ಅಲ್ಲಿ ನೆಲ್ಲಿಕಾಯಿಯ ಯಜಮಾನಿ ಅಟ್ಟಿಸಿಕೊಂಡು ಬಂದಿದ್ದು ಎಲ್ಲವೊ ಈಗ ಕವನದ ಸಾಲುಗಳಿಗಷ್ಟೇ ಸೀಮಿತ, ನೀನು ವೇದಿಕೆಯಲ್ಲಿ ಹಾಡಿದ ಮೊದಲು ನನ್ನಲ್ಲೇ ಬಂದು ಹೇಗೆ ಹಾಡಿದೆ ಎಂದಾಗ ಉಸಿರಾಟವೇ ನಿಂತ ಹಾಗಿತ್ತು, ಆದರೊ ತಮಾಷೆಗೆ ಪ್ರೀತಿಯೇ ಚನ್ನಾಗಿ ಹಾಡಿದ್ಲು ಅಂದಾಗ ನೀನು ಇಡೀ ರಾತ್ರಿ ಅತ್ತಿದ್ದೆ ಅನ್ನೊದು ಮೊರು ದಿನಗಳ ನಂತರದ ಬೇಟಿಯಲ್ಲಿ ಅರ್ಥವಾಗಿತ್ತು. ಎಲ್ಲರೊ ಸ್ನೇಹದಲ್ಲಿ ಇರಬಹುದು ಆದರೆ ನಮ್ಮ ಸ್ನೇಹದ ಬದುಕು ನನಗೇನೋ ವರ್ಣಿಸಲಾಗದು ಅನ್ನುವಷ್ಟಿತ್ತು, ನಾನು ನಿನ್ನಲ್ಲಿ ಯಾವ ಕನಸನ್ನು ಮೊಡಿಸಿದೆನೋ, ನನ್ನ ಯಾವ ನೆರಳು ನಿನಗೆ ಇಷ್ಟವಾಯಿತೋ ನನಗಂತೊ ಗೊತ್ತಿಲ್ಲ, ಆದರೆ ನಿನ್ನ ನಗು, ನಡಿಗೆ , ಮನಸ್ಸು, ಪ್ರತಿ ನೆರಳೊ ನನಗಿಷ್ಟ, ನೀನು ಸ್ವಲ್ಪ ಎತ್ತರವಾದಾಗ ನನ್ನ ಕನಸುಗಳ ಮನೆಯ ಬಾಗಿಲುಗಳೊ ಎತ್ತರವಾಗಿದ್ದು ನನಗೆ ತಿಳಿಯಲೇ ಇಲ್ಲ, ನೀನು ಮತ್ತೊ ಎತ್ತರವಾದಾಗ ನಿನ್ನ ನಡತೆಯ ತಂತಿ ಮತ್ತೊಬ್ಬರಿಂದ ಮೀಟಲ್ಪಡುತ್ತದೆ ಅನ್ನೋದು ನಾನು ಕಣ್ಣಿಂದ ನಂಬಲಾಗದ ಸತ್ಯ, ಅಂಗಾಗಗಳೊ ಅದು ನೀನಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿತ್ತು, ಆದರೆ ಮನಸ್ಸು ಮಾತ್ರ ನಿನ್ನ ನಗುವನ್ನು ಕಂಡುಹಿಡಿಯುವಲ್ಲಿ ಸೋಲಲಿಲ್ಲ, ನಾನು ನನ್ನದು ಎಂದಿದ್ದ ನಿನ್ನ ಕೈ ಪರರನ್ನು ಎಳೆದುಕೊಂಡು ಬರುವಾಗಲೇ ತಿಳಿದಿತ್ತು ನೀನು ನನ್ನವಳಲ್ಲ ಅನ್ನೋದು, ನಿಂತಲ್ಲೇ ನಿಮ್ಮಿಬ್ಬರನ್ನು ಹಾರೈಸಿದೆ ಸುಖವಾಗಿರಿ ಎಂದು. ನನ್ನ ಮನದಲ್ಲಿ ಬತ್ತಿದ ಬಾವಿಯ ಕಥೆಯನ್ನು ನನ್ನ ಸಹೋದರಿಯಲ್ಲಿ ಬಿತ್ತುತ್ತಿದ್ದೆ, ನನ್ನವಳಾದ ನೀನು ವಿವಾಹವಾಗಿ ಸುಖವಾಗಿದ್ದಿ ಅನ್ನೊ ಪದಕ್ಕೆ ಸಹೋದರಿಯ ಕಣ್ಣುಗಳಲ್ಲಿ ವಿಶೇಷವಾದ ಉದ್ವೇಗ ವ್ಯಕ್ತವಾಗಿತ್ತು, ಇಲ್ಲ ಆಕೆಗೆ ಮದುವೆಯಾಗಿಲ್ಲ ಅಂದಾಗ ನಾನು ನೋಡಿದ್ದು ಕನಸು ಎಂದು ಸುಮ್ಮನಾದೆ,
ಆದರೆ ನಿನ್ನ ನನ್ನ ಮತ್ತೊಂದು ಬೇಟಿ ಕಾಲದೊಳಗಿನ ಬದುಕು ಹೊವನ್ನೊ ಮುಳ್ಳಾಗಿಸುತ್ತದೆ ಅನ್ನುವುದನ್ನು ನನಗೆ ನಿನ್ನ ಮೊಲಕ ತೋರಿಸಿಕೊಟ್ಟಿದೆ. ಹೇಗಿರುವುದೆಲ್ಲ ಹೇಗಾಗುತ್ತದೆ, ಬಾಳಿನಲ್ಲಿ ಬೆತ್ತಲೆಯಿದ್ದಾಗ ಅದು ಬಾಲ್ಯ, ಬಾಲ್ಯದ ನಂತರವೊ ಬೆತ್ತಲೆಯಾದರೆ......?