Wednesday, November 23, 2011

ಪರಮಾತ್ಮ





ನಾದಸ್ವರವನ್ನು ಅಪಮಾನಿಸಿದ ಮೊತ್ತ ಮೊದಲ ಚಿತ್ರ ಪರಮಾತ್ಮ

ಕಲೆ ಏಕೆ ಕಾಲ ಕಸವಾಯಿತು ಯೋಗರಾಜ್ ಭಟ್ಟರಿಗೆ.? ಸುಂದರವಾದ ಚಿತ್ರ ನಿರ್ಮಿಸುವ ಮತ್ತು ವಿವಾದಗಳ ಮುಡಿ ಏರದ ಸಾಧಕ ಯೋಗರಾಜ್ ಭಟ್ ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಅಥವಾ ಪಂಚರಂಗಿ ಚಿತ್ರಗಳು ಯಾವುದೇ ವಿವಾದಗಳೀಗೆ ಮಣೆ ಇಡದೇ ಅಭಿಮಾನಿಗಳಲ್ಲಿ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಭಟ್ಟರ ಚಿತ್ರ ಎಂದರೆ ವಿಚಿತ್ರ ಡೈಲಾಗ್ ಸುರಿಮಳೆಗೇನೂ ಬರವಿಲ್ಲ, ಅಷ್ಟಲ್ಲದೆ ಅವರಿತ್ತ ಚಿತ್ರಗಳಲ್ಲಿ ಪ್ರತಿಬಂದಿಸುವಂತಹ ಅಪಚಾರಗಳೇನೂ ನಡೆದಿಲ್ಲ, ಯೋಗರಾಜ್ ಭಟ್ ಎಂದರೆ ನಯ ಸ್ವಭಾವದ ಸಾತ್ವಿ ಅವರ ಕಲಾಭಿರುಚಿಯನ್ನು ಯಾವ ಚಿತ್ರ ರಸಿಕರೂ, ನಟರೂ ತಳ್ಳಿಕಾಕಿಲ್ಲ. ಈಗ ಯೋಗರಾಜ್ ಭಟ್ ಚಿತ್ರವೆಂದರೆ ಜನ ಚಿತ್ರಮಂದಿರದಲ್ಲಿ ಟಿಕೇಟ್ ಗಾಗಿ ಮುಗಿಬೀಳುವುದು ಸುಳ್ಳಲ್ಲ, ಅದಕ್ಕೆಲ್ಲ ಅವರ ಚಿತ್ರದಲ್ಲಿನ ಶ್ರದ್ದೆಯ ಕೆಲಸ, ಡೈಲಾಗ್ ಝಲಕ್ ಕಾರಣವಾಗಿದೆ. ಆದರೂ ಕಲಾವಸ್ತುಗಳೀಗೆ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಉಳ್ಳವರು ಅದನ್ನು ಕಡೆಗಣಿಸಿರುವುದು ವಿಷಾದನೀಯ.

ನಾದಸ್ವರವನ್ನು ಪರಮಾತ್ಮ ಚಿತ್ರ ಕಡಾಖಂಡಿತವಾಗಿ ಅವಮಾನಿಸಿದೆ, ನಾಯಕಿ ವೇದಿಕೆಯಲ್ಲಿ ನಾದಸ್ವರವನ್ನು ನುಡಿಸುವಾಗ ಆ ಸ್ವರದ ಬಗ್ಗೆ ನಾಯಕ ಅತ್ಯಂತ ಕಠೀಣವಾಗಿ ಅವಹೇಳನ ಮಾಡುತ್ತಾನೆ, ನಾಯಕಿ ನಾದಸ್ವರವನ್ನು ಹಿಡಿದುಕೊಂಡು ನಾಯಕನ ಬೆನ್ನಮೇಲೆ ಹತ್ತಿ ಕೂರುತ್ತಾಳೆ. ಇನ್ನೊಂದು ಕಡೆ ನಾಯಕ ನಾಯಕಿಯನ್ನು ತೆಪ್ಪದಲ್ಲಿ ಕರೆದೊಯ್ಯುವಾಗ ನಾಯಕ ಕಡೆಗೋಲಾಗಿಸಿ ನಾದಸ್ವರದಿಂದಲೆ ನೀರನ್ನು ಹಿಂದಕ್ಕೆ ತಳ್ಳುತ್ತಾನೆ. ಇಲ್ಲಿ ನಿರ್ದೇಶಕರ ದಾರಿತಪ್ಪಿದ ಮುತುವರ್ಜಿಯ ಕೆಲಸ ಎದ್ದು ಕಾಣುತ್ತಿದೆ. ಕಲಾವಿದನ ಕೈಯ್ಯಲ್ಲಿ ಇರುವ ವಸ್ತು ಆತನ ಕಲೆಗೆ ಒಂದು ಸ್ಪೂರ್ತಿ, ಆತ ಅದನ್ನು ಪೂಜಿಸುತ್ತಾನೆ, ಆದರೆ ಯೋಗರಾಜ್ ಭಟ್ ತಮ್ಮ ಚಿತ್ರದಲ್ಲಿ ನಾದಸ್ವರಕ್ಕೆ ಇರುವ ಮೌಲ್ಯವನ್ನು ಮರೆತು ನಿಂದಿಸಿದ್ದಾರೆ, ಚಿತ್ರದಲ್ಲಿ ನಾದಸ್ವರ ನಾಯಕ ನಾಯಕಿಯ ಕೈಯ್ಯಲ್ಲಿ ಅಡ್ಡಾದಿಡ್ಡಿಯಾಗಿ ಉಪಯೋಗಿಸಲ್ಪಡುತ್ತದೆ,

ಕಲಾ ವಸ್ತುಗಳನ್ನು ಕಲಾವಿದರೇ ನಿಂದಿಸಿದರೆ ಹೇಗೆ.! ದಿನದಿಂದ ದಿನಕ್ಕೆ ನಮ್ಮ ಸಂಸ್ಕ್ರತಿ,ಮೌಲ್ಯಗಳು ಬರಿದಾಗುತ್ತಿವೆ, ಇತ್ತೀಚೆಗೆ ಕನಿಷ್ಟ ಚಿತ್ರಗಳಲ್ಲಾದರೂ ಯಕ್ಷಗಾನ ಪಾತ್ರಧಾರಿಗಳು ಚಲನಚಿತ್ರದ ಹಾಡುಗಳಲ್ಲಿ ಮನಬಂದಂತೆ ನರ್ತಿಸುತ್ತಿದ್ದಾರೆ, ಇಲ್ಲಿ ಯಕ್ಷಗಾನದ ಬಗ್ಗೆ ಪಬ್ಲಿಸಿಟಿ ಸಿಗುತ್ತದೆ ಅನ್ನುವುದೊಂದು ಹುಚ್ಚು ಕಲ್ಪನೆಯಷ್ಟೆ.! ಒಂದು ಕಲೆಯನ್ನು ಪ್ರದರ್ಶಿಸಲು ಅದರದ್ದೇ ಆದಂತಹ ವೇದಿಕೆಗಳಿವೆ ಆ ವೇದಿಕೆಯಲ್ಲೇ ಅದನ್ನು ಪ್ರದರ್ಶಿಸಬೇಕು, ಸಂಸ್ಕ್ರತಿ ಅದಕ್ಕಿರುವ ವೇದಿಕೆಯಿಂದ ಕೆಳಗಿಳಿದರೆ ಮತ್ತೆ ಅದರ ಮೌಲ್ಯವನ್ನು ಗಳಿಸುವುದು ಸಾಧ್ಯವಿಲ್ಲದ ಮಾತು, ಹೆಚ್ಚಾಗಿ ದಕ್ಷಿಣ ಕನ್ನಡದ ಭಾಗಗಳಲ್ಲಿ ಭೂತಾರಾಧನೆ ಒಂದು ಶ್ರೇಷ್ಟವಾದ ಪರಂಪರೆ, ಆಚರಣೆ, ಅಲ್ಲಿ ಭೂತ,ದೈವಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಆದರೆ ಈಗ ಆ ಭೂತ ದೈವಗಳ ವೇಷಭೊಷಣಗಳನ್ನು ತೊಟ್ಟು ಬೀದಿಗಳಲ್ಲಿ ಮೆರವಣಿಗೆ ಹೊರಡುವ ಕಾಲ ಬಂದಿದೆ, ನಂಬಿಕೆಯಲ್ಲಿನ ಸಾಂಸ್ಕ್ರತಿಕತೆ ಕೇವಲ ಮನರಂಜನೆಯಾಗಿ ಬೀದಿಗಿಳಿಯುವ ಕಾಲ ದೂರವಿಲ್ಲ.

ಯೋಗರಾಜ್ ಭಟ್ ಅವರು ಚಿತ್ರದಲ್ಲಿ ನಾದಸ್ವರವನ್ನು ಈ ರೀತಿಯಾಗಿ ಕಡೆಗಾಣಿಸಿರುವುದು ಮುಗಿದುಹೋದ ಕಥೆ, ಆದರೆ ಇನ್ನು ಮುಂಬರುವ ಚಿತ್ರಗಳು ಆ ವಿಷಯವನ್ನು ಅನುಕರಿಸುತ್ತವೆ, ಮುತ್ತು ಒಡೆದರೆ ಮತ್ತೆ ಸರಿಪಡಿಸಲಾಗುವುದಿಲ್ಲ ,ಸಂಗೀತ ವಾದ್ಯಗಳಲ್ಲಿ ನಾದಸ್ವರ ಎಂಬುವುದು ಒಂದು ಮೇಲ್ಮಟ್ಟದ ವಾದ್ಯ, ಅದರ ಮೌಲ್ಯವನ್ನು ಹಿರಿಯರಿಂದ ಅಥವಾ ತಿಳಿದವರಿಂದ ಅರಿತರೆ ಮತ್ತೆ ಈ ತಪ್ಪುಗಳು ಮುಂದುವರಿಯುವುದು ಅಸಾಧ್ಯ, ಕಲೆಯನ್ನು ಪ್ರೀತಿಸಿ ನೋಡಿ, ಗೌರವ ಭಾವನೆ ತಾನಾಗಿಯೇ ಹುಟ್ಟುತ್ತದೆ. ನಾದವನ್ನು ನುಡಿಸಿದ ಮಾನವ ಕಲಾಕಾರ ನಿಜ ಆದರೆ ಆತ ನುಡಿಸಿದ ವಾದ್ಯವನ್ನೇ ಮರೆತರೆ ಹೇಗೆ....?

ಧನ್ಯವಾದಗಳೊಂದಿಗೆ..

ಲೋಕು ಕುಡ್ಲ,,,














Saturday, June 25, 2011

ಈ ಭುವಿಗೆ ಧನ್ಯವಾದ...

ಹಬ್ಬಿದ ಹುಬ್ಬು ನಯನಕೆ ಸೌಂದರ್ಯದ ಬೇಲಿ
ಮಾಧುರ್ಯದ ಚೈತನ್ಯ ಮನಕೆ ಪುಷ್ಪದ ಗಾಳಿ
ಪಚ್ಚೆ ಪಸಿರು ನಿಸರ್ಗ ಮಾನವ ಮನಕೆ ಸಾಂತ್ವನ
ಎತ್ತಣಿಂದೆತ್ತವೋ ಹಸಿರು-ಉಸಿರಿನ ಈ ಬಂದನ

ಕನಕಾಂಬರದಲಿ ಇಬ್ಬನಿಯ ಸೊಬಗು
ಅತ್ತಿಂದಿತ್ತ ತರಗೆಲೆಯ ನರ್ತನ
ತಿರುಗು ದಾರಿಗಳ ಸ್ನೇಹ ಅವಲಂಬನ
ಸೌಂದರ್ಯ ಚಿಲುಮೆಯೊಳಗಿನ ಈ ಚಂದನ ವನ

ಗಿರಿ ಶಿಖರಗಳ ಕಂಪು ತಂಪಿನ ಚುಂಬನದಲಿ
ಹಸಿರು ಚಟ ಪಟ ಸದ್ದಿಗೆ
ಹಕ್ಕಿ ಚಿಲಿ ಪಿಲಿ ಗಾನ ಸೇರಿದರೆ
ಮತ್ತೇರದೆ ಮತ್ತೇನು ಮನ ಬೇರಗಾಗುವಷ್ಟಿದೆ
ಪರಿ-ಸರದ ಸ್ವರ ಮಾಧುರ್ಯದ ಸೊಬಗು

ಪಚ್ಚೆ ಪರ್ವತ ಸ್ವಚ್ಚೆ ಭೂ ತಾಯಿ
ನಲ್ಮೆಯ ನಾವಿಕನಂತೆ ಈ ನಂದನ ವನ
ಕರವ ಜೋಡಿಸಿ ಬಂಧಿಸುವ ತವಕ
ಒಮ್ಮೆ ಮುತ್ತಿಸುವ ಪುಳಕ
ನಂದನದ ಧರೆಯನು ಚಂದನದ ಗಿರಿಯನು

ಹಾವು ಹೂವು ಹುಳು ಹುಪ್ಪಟೆಯ ರಂಗು
ಚೆಲ್ಲಿ ಚೆದುರಿದ ಚದುರಂಗದ ಬದುಕು
ಮನಬಂದೆಡೆಗೆ ಹರಿಯುವ ಹಳಿ ನೀರು
ಸರ್ವ ಪರ್ವಗಳ ಚಿತ್ತಾರದ ಮೆಲುಕು

ಬುವಿಯ ಆಂತರ್ಯಕೆ ಭಾರವಲ್ಲ
ಕತ್ತು ಕುಯ್ಯುವರೆಂಬ ಭಯವಿಲ್ಲ
ಮದ ಮಚ್ಚರವಿಲ್ಲದೆ ಹಸಿದ ನಾಲಗೆಗೆ ಸಿಹಿಯು
ಒಂದು ಮರದ ಕೊಂಬೆಯಷ್ಟೆ ಸಾಕೆಂಬ ಜೇನು ಗೋಡು

ಆಗಸ ಪ್ರಥ್ವಿಗೆ ಸಮ್ಮಂದವೆಲ್ಲಿಂದ
ತಣ್ಣನೆಯ ತಂಪಿಗೆ ವರ ಮೋಡ ಬಾನಿಗೆ
ಕಾಮನ ಬಿಲ್ಲಿನ ಕಾಮನೆಯ ಸೋಗಿಗೆ
ಭುವಿಯ ಪಚ್ಚೆ ಸೊಬಗಿಗೆ ಕರಗಿ
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....




Wednesday, June 22, 2011

ತರಕಾರಿ ತಾರೆ.......



ಎನ್ನವಳು ಹಣ್ಣು ಹಂಪಲಿಗಿಂತ ಮಿಗಿಲಾದವಳು

ದುಂಡು ಮೊಗದ ತುಂಡು ಬದನೇ ಕಾಯಿ

ಬಾಳೇ ಹಣ್ಣಿನಂತೆ ಮಿಳ ಮಿಳಗಿನ ಮಿಂಚುಳ್ಳಿ

ನೇರಳೆಗೂ ನೆಂಟ ಸೌತೇ ಕಾಯಿ ಸೊಂಟ

ಹೀರೇ ಬಣ್ಣದ ಸೀರೆಯುಟ್ಟರೆ

ಮಂಡಕ್ಕಿ ಪಾಯಸವೂ ಬಿಸಿ ಆರುವುದು

ಕಪ್ಪು ದ್ರಾಕ್ಷಿಯ ಕಣ್ಣವಳು

ಬೆಂಡೇ ಕಾಯಿ ಕಾಲವಳು

ಜಿಲೇಬಿ ಸಿಹಿಯಂತ ತುಟಿಯವಳು

ಅವಳೇ ಎನ್ನ ಕಂಗಳು ಬಾಳ ಬೆಳದಿಂಗಳು

ನವಿಲು ಕೋಸಿನಂತೆ ನಲ್ಮೆಯ ಗೆಳತಿ

ಕೊತ್ತಂಬರಿ ಸೊಪ್ಪಿನಂತೆ ಸ್ವಾದದ ಸುಂದರಿ

ತರ ತರದ ತರಕಾರಿ ಎನ್ನವಳ ಉಸಬಾರಿ

ಕರಿಬೇವಿನಂತೆ ರುಚಿಗೆ ರಂಬೆಯೊ ಸಾಟಿಯಿಲ್ಲ

ಬೆಳ್ಳುಳ್ಳಿಯಂತೆ ಬೆಳ್ಳಗಿನ ಮನಸವಳು

ಸಾಸಿವೆಯಂತೆ ಪಟ ಪಟನೆ ಪುಟಿಯುವಳು

ಸಕ್ಕರೆಯ ಸಿಹಿಯವಳು ಅಕ್ಕರೆಯ ಗೆಳತಿ,



Thursday, June 9, 2011

ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..

ಇದು ಸಂಸಾರದ ಗುಟ್ಟು.... ಯಾರಿಗೂ ಹೇಳ್ಬೇಡಿ...:-)

ಮಗನನ್ನು ಹೆತ್ತು ಹೊತ್ತು ಸಾಕಿ ಸಲಹಿ ವಿದ್ಯಾವಂತನನ್ನಾಗಿಸಿ ಅವನೂ ಮತ್ತೊಬ್ಬರಂತೆ ತನ್ನ ಕಾಲಲ್ಲಿ ತಾನು ನಿಲ್ಲಲು ಮೊದಲ ಪ್ರೇರಣೆಯೇ ತಾಯಿ, ಮಗನ ಪ್ರಗತಿಗಾಗಿ ಎಂತೆಂತ ನೋವು ಚುಚ್ಚು ಮಾತುಗಳನ್ನೂ ಸಹಿಸಿ ಹೊರಬಂದಿರುತ್ತಾಳೆ, ಆದರೆ ಅವೆಲ್ಲವೂ ನನ್ನ ಮಗ ಎಂಬ ಪ್ರೀತಿಯ ಗುಚ್ಚದಲ್ಲಿ ಮಾಸಿ ಹೋಗಿರುತ್ತದೆ ವಿನಹ ಎಂದಿಗೂ ಆ ನೋವು ಆಕೆಗೆ ಭಾರವೆನಿಸಿರುವುದಿಲ್ಲ, ಇದು ಆಕೆಯ ಜೀವನದ ಹಾದಿಯಲ್ಲಿ ಎಲ್ಲವನ್ನೂ ಸ್ವತಹ ಅನುಭವಿಸಿ ತಾಯಿ ಎಂಬ ಅಮೊಲ್ಯವಾದ ಪೀಠವನ್ನು ನಯವಾಗಿ ಪ್ರೀತಿಯಿಂದ ಸ್ವೀಕರಿಸಿ ಎಲ್ಲ ಕಷ್ಟವನ್ನೂ ಸಹಿಸಿ ಅದೆಷ್ಟೋ ಕನಸಿನ ಭಂಡಾರವನ್ನು ಹೊತ್ತು ಮಗನು ಒಂದು ಕೆಲಸ ಸಂಪಾದಿಸಿದಾಗ ಅದೇನೋ ಜೀವನದ ಒಂದು ಮೆಟ್ಟಿಲನ್ನು ಹತ್ತಿದ ತ್ರಪ್ತಿಯಿಂದ ಸಂತೋಷಪಡುತ್ತಾಳೆ. ಮಗನಿಗೆ ವ್ರತ್ತಿ ಅನ್ನೋದು ಏನೂ ದೊರೆತಾಯಿತು ಆದರೆ ಇನ್ನು ಒಂದು ಮದುವೆ ಅನ್ನೋದು ಆಗಿ ಹೋದರೆ ನನ್ನ ಕನಸಿನ ಜೀವನದ ಎಲ್ಲಾ ಹೆಜ್ಜೆಗಳನ್ನು ದಾಟಿದಂತೆ ಎಂದು ಹಾತೊರೆಯುತ್ತಾಳೆ, ಅಲ್ಲೂ ಹೆಣ್ಣು ನೋಡೋದು, ಹೆಣ್ಣಿನ ಆಯ್ಕೆ ಮಗನೀಗೆ ಇಷ್ಟವಾಗಿದೆಯೋ ಇಲ್ಲವೋ ಎಂಬ ಭೀತಿ, ಎಲ್ಲದರ ಜವಾಬ್ದಾರಿ ಹೊತ್ತು ಮುಂದುವರಿದಾಗ ಹೂವಿನಂತೆ ಸಾಕಿದ ಮಗನ ಬದುಕು ಮಡದಿ ಅನ್ನೋಳು ಬಂದ ಮೇಲೆ ಹೇಗಿರುತ್ತೋ ಅನ್ನೋ ದುಗುಡ ಎಲ್ಲವನನ್ನೂ ಸಹಿಸುವವಳು ತಾಯಿ. ಆದರೆ ತಾಯಿ ಆ ಸ್ಥಾನದಲ್ಲಿ ಇದ್ದು ಆಕೆಯ ಕೆಲಸಗಳನ್ನು ಸಂಪೂರ್ಣವಾಗಿ ಪ್ರೀತಿಯಿಂದ ಮುಗಿಸಿರುತ್ತಾಳೆ ಇನ್ನು ಆ ತಾಯಿಯ ಮನೆ ಎಂಬ ಅರಮನೆಯ ಸಂಪೂರ್ಣ ಜವಾಬ್ದಾರಿ ಸೊಸೆಗೆ.
ಮಗನ ಮದುವೆ ಮುಗಿದಾಯಿತು ನಗು ನಗುತ್ತಾ ಬಲಗಾಲಿಟ್ಟು ಸೊಸೆ ಒಳಗೆ ಬಂದಾಯಿತು ಇನ್ನು ದರ್ಬಾರೆಲ್ಲಾ ಸೊಸೇದೇ ನೋಡಿ.ಸೊಸೆ ಮನೆ ಬೆಳಗಿಸಬಹುದು ಮನೆ ಮುಳುಗಿಸಬಹುದು.
ನಿಜವಾಗಿಯು ಸೊಸೆ ಗಂಡನ ಮನೆಯಲ್ಲಿ ಸುಖವಾಗಿರಬೇಕು ಅಂದರೆ ಆಕೆಯಲ್ಲಿ ಜಾಣತನವಿರಬೇಕು. ಮೊದಲ ಕೆಲಸ ಗಂಡ ಹೇಗೆ ಅನ್ನೋದನ್ನ ತಿಳಿದುಕೊಳ್ಳುವುದು, ತಿಳಿಯಲು ಪ್ರಯತ್ನಿಸದಿದ್ದರೂ ಸರ್ವೇಸಾಮಾನ್ಯವಾಗಿ ತಿಳಿದೇ ತಿಳಿಯುತ್ತದೆ, ಹೆಂಡತಿಯ ಮುಂದೆ ಮನ ಬಿಚ್ಚದ ಗಂಡನಾರು ಅಲ್ಲವೇ. . ಗಂಡ ಅನ್ನುವವನಲ್ಲಿ ಎಷ್ಟೇ ಒಳ್ಳೆ ಗುಣ ಇದ್ದರೂ ಕೆಟ್ಟ ಗುಣಗಳನ್ನು ತಾಯಿ ತಿಳಿಯಲಿಲ್ಲವಾದರೂ ಮೊದಲು ರಿಸರ್ಚ್ ಮಾಡುವ ಪವರ್ ಮತ್ತು ಆಸಕ್ತಿ ಇರುವುದು ಹೆಂಡತಿಗೆ.
ಎಲ್ಲದರಲ್ಲೂ ಸ್ಟಾರ್ಟಿಂಗ್ ಟ್ರಬಲ್ ಅನ್ನೋದು ಇದ್ದೇ ಇರುತ್ತದೆ ಕ್ರಿಕೇಟ್ ಮ್ಯಾಚ್ ಆಗಿದ್ದರೆ ಮತ್ತೆ ಸರಿಪಡಿಸಿಕೊಳ್ಳಬಹುದು, ಆದರೆ ಇದು ಜೀವನ ಇಲ್ಲಿ ನಾಳೆ ಅನ್ನೋದು ಅನುಭವಿಸುವುದಕ್ಕೆ ಮಾತ್ರ ಇಂದು ಅನ್ನುವುದು ಸರಿಯಾಗಿ ರೂಪಿಸಿಕೊಳ್ಳುವುದಕ್ಕೆ. ಅತ್ತೆ ಸೊಸೆಯಿಂದ ಮೊದಲು ನಿರೀಕ್ಷಿಸುವುದು ನಯವಾದ ಮಾತು, ಉತ್ತಮ ನಡತೆ,ಗುಣ, ಆಕೆಯ ಆಡಂಭರವಿಲ್ಲದ ಸೌದರ್ಯ ಪ್ರಜ್ನೆ, ಮನೆಯವರೆಲ್ಲರನ್ನೂ ಪ್ರೀತಿಯಿಂದ ಓಲೈಸುವ ಮನೋಭಾವ.
ಮಗ ಪ್ರತೀ ದಿನದಂತೆ ಈ ದಿನವೂ ಆಫೀಸ್ ಗೆ ಹೋಗುವುದು ದಿನಚರಿ, ಹಾಗೆಯೇ ಅವನ ಅಮ್ಮ ಮಗ ಹೊರಡೋವಾಗ ಟಿಫನ್ ರೆಡಿ ಮಾಡೋದು ಹೊಸತೇನಲ್ಲ, ಆದರೆ ಸೊಸೆ ಬಂದಮೇಲೆ ಇದು ಬದಲಾಗಬೇಕು "ಅತ್ತೆ ನಾನಿದೀನಲ್ಲ ಇನ್ನೂ ನೀವ್ಯಾಕೆ ಇದನ್ನೆಲ್ಲ ಮಾಡ್ಬೇಕು" ಅನ್ನುವ ಸೊಸೆಯ ಪ್ರೀತಿ ತುಂಬಿದ ಒಂದು ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ರನ್ನಿನ ಕಾತೆ ತೆರೆದಂತೆ. ಅಲ್ಲಿ ಸೊಸೆಯ ಮುಂದೆ ಅತ್ತೆ ಏನೂ ಗೂಣಗದಿದ್ದರೂ ಮರೆಯಲ್ಲಿ ಸಂತಸ ತುಂಬಿದ ಎರಡು ಕಣ್ಣೀರನ್ನು ಸುರಿಸಿರುತ್ತಾಳೆ. ಮನೆ ಕೆಲಸಗಳಲ್ಲಿ ತಾನೂ ಪಾಲು ವಹಿಸಿ ಅತ್ತೆಗೆ ಸಾತ್ ನೀಡುವುದರಿಂದ ಆಕೆಯ ಮನದಲ್ಲಿ ಇನ್ನೂ ಹೆಚ್ಚಿನ ಜಾಗವನ್ನು ಪಡೆದುಕೊಳ್ಳಬಹುದು. ಇಲ್ಲಿ ಅತ್ತೆಯೊಬ್ಬಳ ಮನಗೆದ್ದರೆ ಮಾವನ ಮನವೂ ಗೆದ್ದಂತೆ ಹೇಗಂತೀರಾ ನೀವು ಅತ್ತೆಯ ಪರವಾಗಿ ವಹಿಸಿದ ಎಲ್ಲಾ ಕೆಲಸಗಳೂ ಸಂಜೆ ಮಾವನ ಗಮನಕ್ಕೆ ಚಾಚೂ ತಪ್ಪದೆ ಅಪ್ ಡೇಟ್ ಆಗಿರುತ್ತದೆ ಅಷ್ಟೇ ಅಲ್ಲದೆ ಅಲ್ಲಿ ನಡೆಯದ ಕೆಲವೂಂದು ವಿಷಯಗಳೂ ರೈಸ್ ಆಗಿದ್ದರೂ ಆಶ್ಚರ್ಯವೇನಿಲ್ಲ. ಸೊಸೆಯೊ ಕೆಲಸಕ್ಕೆ ಹೋಗಬೇಕೆಂದಿದ್ದರೆ ಮೊದಲು ಗಂಡನ ಅನುಮತಿ ನಂತರ ಅತ್ತೆ ಮಾವರ ಇಷ್ಟದ ಮೇರೆಗೆ ಹೋಗಬೇಕು. ಕೆಲಸಕ್ಕೆ ಹೋಗಿ ಬಂದು ಸುಸ್ತಾಗಿದೆ ಎಂದು ಸೋಫಾದಲ್ಲಿ ಟಿ ವಿ ರಿಮೋಟ್ ಹಿಡ್ಕೊಂಡು ಕೂತರೆ ಮತ್ತೆ ಕೆಲವೊಂದು ಪ್ರೀತಿ ತುಂಬಿದ ಅನುಮತಿಗಳೀಗೆ ಹರಸಾಹಸ ಪಡಬೇಕಾಗುತ್ತದೆ. ಸಂಜೆ ಕೆಲಸ ಮುಗಿದು ಬಂದು ಅತ್ತೆಗೆ ಸ್ವಲ್ಪ ಸಹಾಯ ಮಾಡಿ ನಂತರ ನಿಮ್ಮ ಕೆಲಸಗಳನ್ನು ಮಾಡಿಕೊಂಡರೆ ಮತ್ತೊಂದು ದಿನ ಸೊಸೆ ಕೆಲಸದಿಂದ ಬಂದಾಗ ಅತ್ತೆಯ ಬಿಸಿ ಬಿಸಿ ಟೀ ರೆಡಿಯಾಗಿರುತ್ತದೆ.
ಗಂಡನಾದವನೂ ಹೆಂಡತಿಯಿಂದ ಮೊದಲು ಬಯಸುವುದು ವ್ಯವಧಾನವಾದ ಮಾತು. ಗಂಡನ ಕೆಲವೂಂದು ನಿರ್ಧಾರಗಳೀಗೆ ಮಾತಿಗೆ ಮಾತು ಬೆಳೆಸಿ ರಂಪ ಮಾಡಿದರೆ ಅದೇ ಸಂಧರ್ಬ ಜೀವನದ ಯಾವುದೋ ಸುಖಕ್ಕೆ ಕಪ್ಪು ಚುಕ್ಕೆಯಾಗಿಬಿಡುತ್ತದೆ, ಆದರೆ ಆ ನಿರ್ಧಾರಕ್ಕೆ ಹೆಂಡತಿಯೊ ಕೆಲವೊಂದು ಅನ್ನಿಸಿಕೆಗಳನ್ನು ಸಮರ್ಪಿಸಬೇಕು ಆ ಸಮರ್ಪಣೆ ಆತನೀಗೆ ಜಾಣ್ಮೆಯಿಂದ ಅರ್ಥವಾಗುವ ರೀತಿಯಲ್ಲಿ ಪ್ರೀತಿಯಿಂದ ಪೌಣಿಸಿದಾಗ ಗಂಡನ ಪ್ರೀತಿ ತುಂಬಿದ ಒಂದು ಮುತ್ತು ಹೆಂಡತಿಯ ಕೆನ್ನೆಯನ್ನು ಅಲಂಕರಿಸುತ್ತದೆ. ಹೆಂಡತಿಯು ಗಂಡನನ್ನು ಗೌರವಿಸುವುದರಿಂದ ಆ ಗೌರವ ಭಾವನೆ ಸಂಬಂದಗಳ ಸುದೀರ್ಗ ಸಂತ್ರುಪ್ತಿಯನ್ನು ಕಲೆ ಹಾಕುತ್ತದೆ. ಆದರೆ ಹೆಂಡತಿ ಗಂಡನನ್ನು ಏಕೆ ಗೌರವಿಸಬೇಕು ಅನ್ನುವ ಭಾವನೆ ಅವಳಲ್ಲಿದ್ದರೆ ಅದು ಮೊರ್ಖತನ. ಗೌರವ ನಾವು ಸಂಪಾದಿಸಬೇಕು ಹೊರತು ನಮ್ಮನ್ನೇ ಗೌರವ ಗೌರವಿಸುತ್ತದೆ ಎಂದು ಕುಳಿತರೆ ತಲೆ ಕೂದಲು ಬಿಳಿಯಾಗುತ್ತದೆ ಅಷ್ಟೇ ಬಿಟ್ಟರೆ ಕತ್ತಲೆಯಲ್ಲಿ ಕಾಣುವುದುದೆಲ್ಲಾ ಮಂಜು ಆನ್ನುವುದನ್ನು ಪಾಲಿಸಿದಂತಾಗುತ್ತದೆ.. ಹೆಂಡತಿ ಗಂಡನನ್ನು ಗೌರವಿಸುವುದು ಅದು ಅವಳ ಜಾಣತನ ಮತ್ತು ಜವಾಬ್ದಾರಿ ನಂತರ ಗಂಡ ಹೆಂಡತಿಯನ್ನು ಗೌರವಿಸುವುದು ಆಕೆಯ ವಿವೇಚನೆಗೆ ಸಿಕ್ಕ ಪ್ರತಿಫಲ. ಅಷ್ಟೇ ಅಲ್ಲದೆ ಆತ ಹೆಂಡತಿಯ ಗೌರವಕ್ಕೆ ಪ್ರೀತಿಯಿಂದ ಮಣಿದು ಆಕೆಯನ್ನೊ ಗೌರವಿಸುತ್ತಾನೆ.

ಸೊಸೆಗೆ ಬದುಕಿನಲ್ಲಿನ ಮತ್ತೊಂದು ಶತ್ರು ಎಂದರೆ ಪಕ್ಕದ ಮನೆಯವರ ಮನೆಯೊಡೆಯುವ ಮಾತು, ಸಾಮಾನ್ಯವಾಗಿ ಪಕ್ಕದ ಮನೆಯ ದೇವಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು, ಅಲ್ಲದೆ ಅವರು ತುಂಬುವ ಕೆಲವೊಂದು ಆಸೆಗಳೀಗೆ ಕಿವಿಕೊಡಬಾರದು. ಮಾತು ಮಾತಿನಲ್ಲೇ ಇರಬೇಕು ಜೀವನದ ಕಷ್ಟಗಳನ್ನು ನೀವು ನಿಮ್ಮ ಅನುಭವಕ್ಕೆ ತಕ್ಕಂತೆ ನಿಭಾಯಿಸಬೇಕು ಹೊರತಾಗಿ ಮತ್ತೊಬ್ಬರೊಡಗಿನ ಚರ್ಚೆಯಿಂದಲ್ಲ. ಎಲ್ಲರ ಜೊತೆಗೂ ಬೆರೆಯುವುದು ಅದು ನಿಮ್ಮ ದೊಡ್ಡಗುಣ ಆದರೆ ಅವರೊಡನೆ ಬೆರೆಯುವ ವಿಚಾರ ನಿಮ್ಮ ಮನೆಯವರೀಗೆ ಸರಿ ಎನಿಸಿತ್ತೋ ಅಥವಾ ಬೇಸರ ತರಿಸಿತ್ತೋ ಅನ್ನುವುದನ್ನು ಜಾಣ್ಮೆಯಿಂದ ಪರಿಶೀಲಿಸಿ ಸಂಸ್ಕರಿಸಬೇಕು. ಮತ್ತು ಆ ದಿನದ ರುಚಿ ಅಥವಾ ಕಹಿ ಅನುಭವದ ಎಲ್ಲಾ ವಿಚಾರಗಳನ್ನು ಪಕ್ಕದ ಮನೆಯವರ ಜೊತೆ ಬಡಾಯಿಸುವುದರ ಬದಲು ಅತ್ತೆ ಮಾವ ಗಂಡನೊಡನೆ ವಿವರಿಸಿದಾಗ ನಿಮ್ಮ ಬಗ್ಗೆ ಎಲ್ಲರೀಗೂ ಉತ್ತಮ ಅಭಿಪ್ರಾಯ ಬರುವುದರಲ್ಲಿ ಸಂಶಯವೇ ಇಲ್ಲ. ಗಂಡ ಕೆಲಸದಿಂದ ಬಂದಾಗ, ಅತ್ತೆ ಮಾವರ ಮದ್ಯೆ ತೊಡಕಾದಾಗ ಎಲ್ಲಾ ನೋವುಗಳನ್ನು ಮರೆಸಿ ಸದಾ ನಗುನಗುತ್ತಾ ಓಡಾಡುವುದೇ ಮನೆಯ ಸೊಸೆಗೆ ಮನೆ ಬೆಳಗಿಸಲು ಇರುವ ಅತ್ಯಮೊಲ್ಯವಾದ ಸೂತ್ರ.. ತಾನು ಸೋತಿಲ್ಲ, ತಪ್ಪಿಲ್ಲವಾದರೂ ತನ್ನದೇ ತಪ್ಪು ಎಂದು ಒಪ್ಪಿಕೊಂಡ ನಂತರ ಆ ತಪ್ಪಿನ ನಿಜವಾದ ಮೊಲ ಅತ್ತೆಗೆ ತಿಳಿದಾಗ ನಿಮ್ಮ ಸೊಸೆ ಎಂಬ ಸ್ಥಾನ ಸೊಸೆ ಎಂಬ ದೇವತೆ ಎಂಬ ಮಾತಿನೆಡೆಗೆ ಸಾಗುವುದರಲ್ಲಿ ಸಂಶಯವೇ ಬೇಡ. ಅತ್ತೆ, ಮಾವ, ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿಚಾರಿಸುವುದು ಗಂಡನ ಜವಾಬ್ದಾರಿಗಳನ್ನು ಮೆಲುಕು ಹಾಕಿ ನಿಭಾಯಿಸುವುದು ಮನೆ,ಮನದ ಸೌಂದರ್ಯವನ್ನು ಇನ್ನೂ ಹೆಚ್ಚಿಸುತ್ತದೆ.

ಹೆಣ್ಣಿಗೆ ಗಂಡನಿಗಿಂತಲೂ ಹೆಚ್ಚಿನ ಮೋಹವಿರುವುದು ಚಿನ್ನಾಭರಣಗಳಲ್ಲಿ, ಅದನ್ನು ಗಂಡನ ಜೊತೆಗೆ ಜಗಳ ಮಾಡಿಕೊಂಡು ಮನೆಯ ಇತರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳದೆ ಎರ್ರಾ ಬಿರ್ರಿ ಗದ್ದಲ ಸ್ರುಷ್ಟಿಸಿ ತನ್ನ ಆಸೆಗಳನ್ನು ತೀರಿಸಿಕೊಳ್ಳುವುದರ ಬದಲು ಗಂಡನ ಅಥವಾ ಅತ್ತೆ ಮಾವರ ಜೊತೆಗೆ ಪ್ರೀತಿಯ ಮಾತುಗಳಿಂದ ತನ್ನ ಮನದ ಆಸೆಗಳನ್ನು ತೋಡಿಕೊಳ್ಳುವುದರಲ್ಲಿ ಹೆಚ್ಚಿನ ಸುಖವಿದೆ. ನೀವೇ ನಿಮಗೆ ಬೇಕಿರುವ ಚಿನ್ನವನ್ನು ಕೊಂಡು ಕೊಳ್ಳಲು ಮನೆಯವರಿಗೆಲ್ಲರಿಗೂ ತಿಳಿಯುವ ರೂಪದಲ್ಲಿ ಹಣವನ್ನು ಒಟ್ಟುಗೂಡಿಸಿಕೊಳ್ಳಿ, ನಿಮ್ಮ ಆಸೆ ಮತ್ತು ತೊಳಲಾಟವನ್ನು ನೋಡಿ ನಿಮ್ಮತ್ತೆ ಪ್ರೀತಿಯಿಂದ ನಕ್ಕು ಆಕೆ ಬೆಲ್ಲದ ಡಬ್ಬದಲ್ಲಿ ಅವಿತಿಟ್ಟ ಚಿಲ್ಲರೆ-ಪಲ್ಲರೆ ದುಡ್ಡನ್ನು ನಿಮ್ಮ ಮಡಿಲಿಗೆ ಸುರಿಯುತ್ತಾರೆ, ಆದರೆ ಅದರ ಹಿಂದೆ ಪ್ರೀತಿ ಇರುವುದಂತೂ ಕಂಡಿತಾ ಆ ಬಗ್ಗೆ ವಿಚಾರ ತಿಳಿದ ಬಳಿಕ ಮಾವನೂ ನನ್ನ ಮುದ್ದಿನ ಸೊಸೆಗೆ ಕೊಡುವುದರಲ್ಲಿ ನಾನೇನು ಕಡಿಮೆ ಎಂದು ಜಂಬಕ್ಕೆ ನಿಮಗೆ ಸಹಾಯ ಮಾಡಬಹುದು, ಇನ್ನು ಗಂಡ ಸುಮ್ಮನಿರುತ್ತಾನೆಯೇ ಅವನೂ ತನ್ನ ಕೈಯ್ಯಲ್ಲಾದಷ್ಟನ್ನು ಹೆಂಡತಿಯ ಇಚ್ಚೆಯನ್ನು ಪೂರೈಸುತ್ತಾನೆ. ಇದೀಗ ಚಿನ್ನ ನಿಮಗೆ ಪುಕ್ಕಟೆ ಸಿಕ್ಕಿದ್ದಲ್ಲ ನೀವು ಮನೆಯವರ ಮನ ಗೆದ್ದ ಸಾಧನೆಗೆ ಪ್ರಶಸ್ತಿ. ಅದೇ ಹಟ ಮಾಡಿಕೊಂಡು ಗಲಾಟೆ ಗದ್ದಲದಿಂದ ಗಳಿಸಿದ ಚಿನ್ನದಿಂದ ಈ ರೀತಿಯ ಸುಖವಿರುತ್ತಿತ್ತೇ....?

ಮನೆಗೆ ಮಗು ಬಂದ ಮೇಲೆ ಸೊಸೆಗೆ ಮನೆಯವರ ಮೇಲೆ ಪ್ರೀತಿ ಕಡಿಮೆಯಾಗಬಾರದು. ಎಲ್ಲಾ ಸಮಯದಲ್ಲೂ ಮಗುವನ್ನೇ ಮುದ್ದಿಸುತ್ತಾ ಕುಳಿತರೆ ಮತ್ತೆ ಎಲ್ಲೋ ಎಡವಿದ ಅನುಭವ ನಿಮ್ಮ ಗಮನಕ್ಕೆ ಬಾರದಿರುವುದಿಲ್ಲ. ಮಗುವನ್ನು ಅತ್ತೆ ಮಾವನಿಗೂ ಮುದ್ದಿಸಲು ಎಡೆಮಾಡಬೇಕು ಮತ್ತು ಪ್ರೋತ್ಸಾಹಿಸಬೇಕು. ಆ ಮಗು ಮನೆಯವರೆಲ್ಲರನ್ನೂ ಪ್ರೀತಿಸುವಂತೆ ಮಾಡಬೇಕು ಮಕ್ಕಳಾದಮೇಲೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಹೆಚ್ಚಿದರೂ ಗಂಡನ ಜೊತೆ ಈ ಹಿಂದೆ ಕಳೆದ ದಿನಗಳನ್ನು ಮರೆಯಬಾರದು ಪ್ರೀತಿ ಕಡಿಮೆಯಾಗಬಾರದು.
ಇಂದು ನೀವು ಸೊಸೆಯಾಗಿ ಮನೆಬೆಳಗಿಸಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.

ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..

Tuesday, June 7, 2011

ಮನ ಮಾಧುರ್ಯ ...


ಅಂದ ತುಳುಕುತಿಹುದು ಗಿಣಿಯು ಪಂಜರದೊಳೇಕೆ... ?
ಆಸೆ ಇಲ್ಲವೇ ಗಗನಕೆ ಹಾರಿ ಕುಣಿಯಲು.......!
ಅಂದ ಸೋರಿಹುದು ಕಾಗೆ ಗಗನವ ಬಾಚಿಹುದು
ಕಪ್ಪು ವರ್ಣವೇ ಕಾ ಕಾ ಹಾಡಿಗೆ ಸೌಂದರ್ಯದ ಹೊನಲು..!

ಸೋಲಿನ ಬದುಕು ಸಾಲು ಸಾಲಾಗಿ ಎಲ್ಲೆ ಮೀರಿದರೊ
ಒಂದು ಗೆಲುವಿನ ಏಣಿ ಏರಲು ಕಾಲಿಗೇಕೆ ದಣಿವಾಯಿತು....?
ಮನವು ಮುನಿದಾಗ ಕ್ಷಣದೊಳು ಹರಿದ ಕಣ್ಣೀರು
ಉಸಿರು ನಿಂತಾಗ ಏಕೆ ಬರಿದಾಯಿತು.......!

ಬಂದು ಬಳಗಗಗಳು ಮನೆತನದ ಕವಲುಗಳು
ಮಾತಿನ ಸೋಗೆಗೇಕೆ ಹರಿದು ಚೊರಾಗುವುದು.......?
ನಿನ್ನೆಗಳಲಿ ಪ್ರೀತಿ ಸ್ನೇಹ ಮಧುರ ಬಾಂದವ್ಯದೊಳು ನಗುವಿತ್ತು..!
ನಾಳೆಗಳ ನಾಲಗೆಯಲಿ ನಿನ್ನೆಗಳ ಮೆಲುಕುಗಳೇಕೆ ಶೊನ್ಯ.....?

ಜೋಕಾಲಿಯಂತೆ ಬದುಕು ತೊಗಿದರೆ ಮುಂದೆ ಹಿಂದೆ ಎರಡರ ಅರಿವು
ತೊಗಿದ ದಾರ ಕೊರಿದ ಆಸನ ಕೇವಲ ನೆಪವಷ್ಟೆ...!
ಅಂದು ಅಮ್ಮನ ತುತ್ತು...ಇಂದು ಹೆಂಡ ’ತಿ’ ಯ ಮುತ್ತು
ಪ್ರೀತಿ ಮರೆತು ಸುಕದ ಆಲಿಂಗನವಷ್ಟೆ....!
ಕಮಲಕೆ ನಗುವಿತ್ತು ಬೇರಿಗೆ ನೀರಿತ್ತು...
ಬೇರು ನೀರಿನ ರುಣಕೆ ಕಮಲಕೆ ಕಾಲವಿಲ್ಲ...!

ಸುಖ ಶಾಂತಿ ನೆಮ್ಮದಿ ಕಾಲಕ್ಕೆ ತಾಳಗಳು...
ಪ್ರೀತಿ ಸ್ನೇಹ ನಂಬಿಕೆ ಬದುಕಿನ ಮೌಲ್ಯಗಳು..
ಕಣ್ಣ ಕನಸು ಮನ ಮಾಧುರ್ಯ
ಗಾನದೊಳೇಕೆ ಮಧುರ... ಬಾಳಿನಲೇಕೆ ನಗ್ನ.....?

Thursday, June 2, 2011

ಹಿಜಡಾ ಎಂಬ ದುಗುಡ..


ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು,
ಇದು ಅವನು ಅವಳಾದ ಬದುಕು ಬಾಲ್ಯ ಹೀಗಿತ್ತು,
ಅವನ ಬಾಲ್ಯದಲ್ಲೊ ಕನಸುಗಳ ಸೌಂದರ್ಯದ ಸ್ವಾದ.

ಬದುಕೊಂದು ಪುಟ್ಟ ಸಾಲು, ಪುಟ್ಟ ಪುಟ್ಟ ಆಸೆಗಳ ಮೆಟ್ಟಿಲೇರಿ ಆಗಸವನ್ನೇ ಗಿಟ್ಟಿಸುವ ಬಯಕೆ, ಅವನೂ ಒಬ್ಬ ಪುಟ್ಟ ಕಂದಮ್ಮ ಎಲ್ಲರಂತೆಯೇ ಅವನಮ್ಮನೂ ಅಕ್ಕರೆಯಿಂದ ಓಲೈಸುತ್ತಿದ್ದಳಂತೆ, ಆಕೆಯ ಎದೆಹಾಲನ್ನು ಅವನೂ ಚುಂಬಿಸಿದ ಮಮತೆ, ಅವನಿಗೂ ಅವನಮ್ಮ ಗಲ್ಲದ ಮೇಲೆ ಕಾಡಿಗೆಯ ಬೊಟ್ಟು ಉಂಗುರಬೆರಳಿಂದ ಹಚ್ಚುತ್ತಿದ್ದ ನೆನಪು, ಎತ್ತಿ ಮುದ್ದಾಡಿದ್ದಳು, ನೆರೆಮನೆಯ ಪುಟಾಣಿಗಳೊಡನೆ ಚೆಂಡಾಟ ಆಡುತ್ತಿದ್ದ, ಹಠವಿತ್ತು ಅಳುತ್ತಿದ್ದ, ಅಮ್ಮ ಬುತ್ತಿ ಕಟ್ಟಿದ್ದಳು, ಅಪ್ಪ ಬೆನ್ನಿಗೆ ಬ್ಯಾಗ್ ಹಾಕಿ ಎತ್ತಿಕೊಂಡು ಸ್ಕೂಟರ್ ನಲ್ಲಿ ಕುಳ್ಳಿರಿಸಿ ಸೈಲೆಂಸರ್ ನ ಕಪ್ಪು ಹೊಗೆಯ ಜೊತೆಗೆ ಅವನ ಹಾಲು ಗಲ್ಲದ ತುಂಟಾಟ ಸಹಿಸಿಕೊಂಡು ಶಾಲೆಯ ಮುಂದಿನ ರಸ್ತೆಯಲ್ಲಿ ನಿಲ್ಲಿಸಿ ಟಾ ಟಾ ಮಾಡಿ ಹೋಗುತ್ತಿದ್ದರು, ಅವನಿಗೂ ಅಪ್ಪ ಅಮ್ಮ ಸಹೋದರ ಸಹೋದರಿ ಸ್ನೇಹಿತರು ಎಲ್ಲಾ ಇದ್ದರು.ಆದರೆ ಅವನ ಮನದಲ್ಲಿ ಇದೆಲ್ಲಾ ಮುಗಿದು ಹೋದ ಕಥೆಯಷ್ಟೆ.


ಹರೆಯ ಹಿರಿದಾಗುತ್ತಾ ಅವನಲ್ಲಿನ ಬದಲಾವನೆ ಕೊಂಚ ತಿಳಿದಿದ್ದರೊ ಏಳನೇ ತರಗತಿ ಮುಗಿದೊಡನೆ ಮನಸ್ಸು ಹಿಡಿತ ತಪ್ಪಿತ್ತು ಭಾವನೆಗಳಲ್ಲಿ ಏನೋ ವ್ಯತ್ಯಾಸ ಅವನೆಂಬ ಬದುಕು ಅವಳೆಂಬಂತೆ ಕಾಡುತ್ತಿತ್ತು, ಮನ ಒಂಟಿ ತನವನ್ನು ಬಯಸಿತ್ತು ಸತ್ಯವೇನೆಂಬುದು ಅದಾಗ ಆ ಮುಗ್ದ ಮನಸ್ಸಿಗೆ ಹೊಳೆಯಲೇ ಇಲ್ಲ, ತನ್ನ ತೊಳಳನ್ನು ಸ್ನೇಹಿತರೊಂದಿಗೆ ತೋಡಿಕೊಂಡ. ಈ ವರೆಗೂ ಆಟದ ಬಗ್ಗೆ ಆಡಿಕೊಂಡ ಸ್ನೇಹಿತರು ಇದೀಗ ಬದುಕಿನ ಬಗ್ಗೆಯೇ ಆಡಿಕೊಳ್ಳುವಂತಾಯಿತು, ಇದೇಕೆ ಬದುಕು ಹೀಗೆ? ನನಗೂ ಹೆಣ್ಣಾಗುವಾಸೆ, ಅವಳ ಜೊತೆ ಕೂರುವ ಆಸೆ,ಮುಡಿಗೆ ಮಲ್ಲಿಗೆ ಮುಡಿಯುವಾಸೆ,ಸೊಂಟ ಬಳುಕಿಸಿ ನಡೆದಾಡುವಾಸೆ ಆದರೆ ನಾಲ್ವರು ಹುಡುಗರೊಡನೆ ಕೊರುವಾಗ ಮನದಲ್ಲೊಂದು ತುಮುಲ ಎಲ್ಲದರ ಜೊತೆಗೆ ಬದುಕೇ ಗೊಂದಲದ ಅಲೆಯ ಜೊತೆ ಅಪ್ಪಳಿಸುತ್ತಿದೆ.

ಎಲ್ಲವನ್ನೊ ತಿಳಿದುಕೊಂಡು ಗಂಡಾಗಿ ಮುನ್ನಡೆಯುವ ಬಯಕೆ ದೂರಾಗಿ ಹೆಣ್ಣಾಗುವ ಬಯಕೆ ನೂರಾಯಿತು ಈ ನಿರ್ಧಾರದೊಡನೆ ಸಂಮ್ಮಂದಗಳೇ ದೂರಾಯಿತು. ಅಂದಿದ್ದ ಅಪ್ಪ ಅಮ್ಮನ ಪ್ರೀತಿ ಇಂದಿಲ್ಲ ಬೇನೆ ಹಂಚಿಕೊಳ್ಳಲು ಸೋದರಿ ಸೋದರರಿಲ್ಲ ಸ್ನೇಹಿತರಿಂದ ಕ್ಷಣ ಕ್ಷಣವೊ ಚುಚ್ಚು ಮಾತು, ಅವನು ಅವನಾಳವನ್ನು ಹಂಚಿಕೊಳ್ಳದಿದ್ದರೂ ವರ್ತನೆಯಿಂದಲೇ ಎಲ್ಲವೂ ಸ್ಪಷ್ಟವಾಗುತ್ತಿತ್ತು.

ಲಿಂಗ ಪರಿವರ್ತನೆಯಿಂದ ಹೆಣ್ಣಾಗಿ ಬದಲಾಗಲು ಆಪರೇಷನ್ ಮಾಡಿಸಿ ಕೊಳ್ಳುತ್ತಾರೆ ಆದರೆ ಚಿಕಿತ್ಸೆಯ ನಂತರ ಸ್ತನ ಮತ್ತು ಕೂದಲ ಬೆಳವಣಿಗೆಗಾಗಿ ವಿವಿದ ರೀತಿಯ ಹಾರ್ಮೋನುಗಳನ್ನು ದೀರ್ಘ ಕಾಲದವರೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅಂತಹ ಹಾರ್ಮೋನು ಚಿಕಿತ್ಸೆಯ ಸಂಧರ್ಬದಲ್ಲಿ ಮಾನಸಿಕ ಒತ್ತಡಗಳು ಸಹಜ ಅಲ್ಲಿ ಪರಿವರ್ತನೆಯಿಂದ ಬಯಕೆಗಳು ತೀರಿತಷ್ಟೆ ಬೇನೆ ಇನ್ನೂ ಹೆಚ್ಚಾಗಿತ್ತು. ಆತನೀಗೆ ಪ್ರಪಂಚದಲ್ಲಿ ನಾನೂಬ್ಬನೇ ಹೀಗೆ ನನಗೊಬ್ಬನೀಗೆ ಲಿಂಗ ಅಪವಾದ ಎಂಬ ತೊಳಲಿತ್ತು, ಅದೆಷ್ಟೋ ಬಾರಿ ಬದುಕೇ ಸಾಕು ಸತ್ತರೆ ಒಂದೇ ಬಾರಿ, ಬದುಕಿದ್ದರೆ ನೋವಿನೊಡನೆ ಚಿಂತೆಗಳ ಕಂತೆ ಅಷ್ಟೆ ಎಂದು ಸಾಯುವ ಸುಲಭ ದಾರಿಯನ್ನು ಹುಡುಕಲು ಹೋಗಿ ಎಡವಿದ್ದ ಮತ್ತೆ ಅಮ್ಮನ ಕೈ ತುತ್ತು ಸಿಗುವುದೋ ಎಂದು ಹೋದರೆ ಮನೆಯ ಬಾಗಿಲೇ ಮುಚ್ಚಿತ್ತು. ಆದರೆ ಅವರಲ್ಲೂ ಸಂಗವಿದೆ ಅವರಿಗೂ ಕನಸುಗಳನ್ನು ಕಟ್ಟುವ ದಾರಿಗಳಿವೆ ಎಂದು ಪ್ರತ್ಯಕ್ಷವಾಗಿ ತಿಳಿದಾಗ ಅವರ ಜೊತೆಗೇ ಸೇರಿಕೊಂಡ ಎಲ್ಲರಂತೇ ತಾನೂ ಕಣ್ಣಿಗೆ ಕಾಡಿಗೆ ತುಟಿಗೆ ಲಿಪ್ ಸ್ಟಿಕ್ ಕೆನ್ನೆಗಷ್ಟು ಪೌಡರ್ ಬಳಿದುಕೊಂಡು ಅಂಗಡಿ,ಸಿಗ್ನಲ್ ಗಳಲ್ಲಿ ಮತ್ತೊಬ್ಬರೆದುರು ಕೈ ಚಾಚುತ್ತಾ ಬದುಕಿನ ಚಕ್ರ ತಿರುಗುತ್ತಿತ್ತು ಆದರೆ ಒಂಟಿಯಾಗಿ ಕುಳಿತರೆ,ಕಣ್ಣು ಮುಚ್ಚಿದರೆ ಆ ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು ಕೆನ್ನೆಯ ಮೇಲೆ ಹರಿದಾಡುತ್ತಿತ್ತು.

ಯಾರದೋ ಮುಂದೆ ನಿಂತು ಹಣಕ್ಕೆ ಕೈ ಚಾಚಿದಾಗ ಅವರ ಕೈಯನ್ನೇ ಹಿಡಿದುಕೊಂಡು ತಮಾಶೆಯ ತಿಮಿರಿಗೆ ಕಾಮದ ಕಣ್ಣಿನಿಂದ ಅವರನ್ನು ಟೀಕಿಸುವುದುಂಟು, ಲಾಡ್ಜ್ ಗಳೀಗೆ ಕರೆತಂದು ಅವರಿಂದ ಎಣ್ಣೆ ಮಸಾಜು, ಸ್ವಲ್ಪ ಅಂದವಿದ್ದರೆ ಗೊಡ್ಡು ದೇಹದ ಸುಖವನ್ನು ಒತ್ತಾಯಪೂರ್ವಕವಾಗಿ ಅವರಿಂದಲೇ ತೀರಿಸಿಕೊಂಡು ರಾಜ ಗಾಂಭೀರ್ಯದಿಂದ ರೂಪಾಯಿಗಳನ್ನು ಮುಖಕ್ಕೆ ಚೆಲ್ಲುತ್ತಾರೆ ಎಂತಹಾ ಅಮಾನವೀಯ ಮನಸ್ಸು,
ಶೇಕಡಾ ೮೦ರಷ್ಟು ಮಂದಿ ನೊಂದುಕೊಂಡೇ ಬದುಕು ಸಾಕು ಅನ್ನೋದನ್ನ ನಿರ್ಧರಿಸುತ್ತಾರೆ, ಕೆಲವೊಬ್ಬರು ಮಂದಿ ಏನಂದರೂ ಪರವಾಗಿಲ್ಲ ಅವರ ಮಾತನ್ನು ಭೇದಿಸುತ್ತೇವೆ ಎಂಬ ದಿಟ್ಟ ನಿಲುವನ್ನು ಹೊಂದುತ್ತಾರೆ.

ಯಾಕೆ ಹಿಜಿಡಾ ಎಂದರೆ ಬದುಕಲು ಅನರ್ಹರೆನ್ನಬೇಕು ಅವರಲ್ಲೂ ಎಷ್ಟೋ ಮಂದಿ ದೇಶವನ್ನೇ ಹುರಿದುಂಬಿಸಿದ ಭರತನಾಟ್ಯ ಕಲಾವಿದರಿದ್ದಾರೆ, ಅವರಲ್ಲೂ ಕಲೆ ಇದೆ,ಅವರಿಗೂ ಸಂಸ್ಕ್ರುತಿ ಇದೆ, ಕಾನೂನು ಕಟ್ಟು ಕಟ್ಟಲೆಗಳಿವೆ ಜನಗಣತಿ ಜಾತಿಗಣತಿಗಳಲ್ಲಿ ಅವರಿಗೂ ಒಂದು ಸರಿಯಾದ ಸ್ಥಾನಮಾನ ನೀಡೋಣ,ಸರಕಾರೀ ನೌಕರಿಗಳನ್ನೂ ಹಂಚೋಣ ಅವರೂ ಕಾಮನ ಬಿಲ್ಲಿನ ಬಣ್ಣದ ಸೊಬಗನ್ನು ಸವಿಯುತ್ತಾರೆ, ಹೆಣ್ಣು ಗಂಡು ಎಂಬ ಮಾನವ ಜಾತಿಯಲ್ಲಿ ಅವರೂ ಒಬ್ಬರು, ಸುಂದರ ಬದುಕಿನಲ್ಲಿ ನೋವಿನ ಸುಳಿಯೊಳಗೆ ಅವರ ಕಣ್ಣೀರೇಕೆ ಕೆನ್ನೆಯಿಂದ ಹರಿದು ನೆಲವನ್ನು ಸೋಕುವುದು.......................?







Tuesday, May 31, 2011

ಅಪ್ಪಿ V/s ಅಪ್ಪು

ತುಳು ಭಾಷೆಯಲ್ಲೊಂದು ಪ್ರೀತಿಯ ಮಿಲನದ ಕವನ...ಸ್ವಲ್ಪ ವಯಸ್ಸಾಗಿದೆ ನೀವೇನೂ ವರಿ ಮಾಡ್ಕೋಬೇಡಿ ಅವ್ರೇ ಅಡ್ಜೆಸ್ಟ್ ಮಾಡ್ಕೋತಾರೆ


ಅಪ್ಪಿ ನಿನ್ನ ತೆಲಿಕೆಗ್ ಮರ್ಲಾಯೆ ಈ ಎನ್ನ ಸಂಗಾತಿ
ಬಲ ಪೋಯಿ ಬಾಕ್ಯಾರ್ ಕಂಡೊಗು
ಅಪ್ಪಿ ದಿನ ನಿಲಿಕೆ ತೆಲಿಪಾವೆ ಜಿವ ನಿಲಿಕೆ ನಲಿಪಾವೆ
ಬಲ ಪಿದಡ್ ಪೊಸ ದಿನತ ಪಾಡಿಗ್...

ಈ ಮಸ್ತ್ ಪೊರ್ಲುಲ್ಲ ಯಾನೂಂತೆ ಕಪ್ಪು
ಬಣ್ಣ ದಾಯೆ ಪನ್ ಮೋಕೆದ ಕಡಲ್ ಗ್
ಈ ಆಲ ರಾಗ ಯಾನಾಪೆ ಲಯ
ಸೇರ್ ಗ ಮೋಕೆ ಪಾರ್ದನದ ಉಡಲ್ ಗ್

ಬಲ ಅಪ್ಪಿ ಸುಗ್ಗಿದ ಕೆಸರ್ ಗ್ ನೇಜಿ ಊರುಗ
ಉರುವಾಂಡ ಗೋಲಿದ ಬೂರುಡು ಅಂಚಿಂಚಿ ನೇಲ್ ಗ
ನೀಲಿ ಕುಂಟಲುಂಡು ಮಂಜಲ್ ತಾರೂಲುಂಡು
ತಡ ಬೊರ್ಚಿ ಬೇಗ ಬಲ ಪೂರ್ತಾಪುಂಡು

ಈ ಎನ್ನ ತಿಗಲೆಡ್ ಮೋಕೆ ಜಿಂಜಿ ಕಡಲ್
ಅಪ್ಪಿ ನಿನನೇ ಎನ್ನೂಂದುಲ್ಲೆ ದಿನ ರಾತ್ರೆ ಪಗೆಲ್
ಯಾನೂಂಜಿ ಪೂವಾಪೆ ಈ ಐಟ್ಟ್ ಅರಲ್
ನಿನ್ನ ದೊಂಬುದ ಬದ್ ಕ್ ಗ್ ಯಾನಾಪೆ ನಿರೆಲ್...

ಬೂತಾಯಿ ಮರ್ವಾಯಿ ಕರಾವಳಿಗ್ ಸೊಬಗತ್ತ
ಕೋಲ ಕೋರ್ದಟ್ಟ ತುಳು ನೆಲತ ಪೂರ್ಲತ್ತ
ನಿನ್ನ ಮೋನೆಡು ತೂಯೆ ತುಳು ನೆಲತ ತೆಲಿಕೆ
ಪರ್ಬ ಗೌಜಿಡ್ ತೆರಿಯೆ ತುಳು ನಾಡ ನಲಿಕೆ

ನಿನ್ನ ಸೆರಂಗ್ ಗ್ ನೆರಿಯಾಪೆ ಯಾನ್
ಮಟ್ಟೆಲ್ ಡ್ ತರೆ ದೀದ್ ಜಿವ ಬುಡೊಡ ಪನ್
ಅಪ್ಪಿ ಪಪ್ಪಿ ಕೊರ್ಪನ ಎಂಕೂಂಜಿ ಈ ದಿನೂನು ಮದಪಾಯೆ
ಈ ಇಜ್ಜಂದಿ ಬದ್ ಕ್ ನನ ಎಂಕ್ ದಾಯೆ...... ನನ ಎಂಕ್ ದಾಯೆ...........?


(ಹಾ ಅಪ್ಪಿ ಅಪ್ಪುಗು ಪಪ್ಪಿ ಕೂರೊಂದು ಉಲ್ಲಲ್ ಮಾತೆರ್ಲಾ ಕಣ್ಣ್ ಮುಚ್ಚಿಲೆ...ರಡ್ಡ್ ಅರಿ ದಕ್ಕ್ ಲೆ..)





ಫೋಟೋ ಕ್ರಪೆ: ರಾಜೇಶ್ ದೇವಾಡಿಗ

Wednesday, May 25, 2011

ಕನಸು**

ನಾನೂ ನನ್ನ ಕನಸು ಚಿತ್ರದ ನಂತರ ನನ್ನಲ್ಲೂ ಒಂದಿಷ್ಟು ಕನಸು......*

(ಸ್ವಲ್ಪ ಹಳೆಯದಾಗಿದೆ ಅಡ್ಜೆಸ್ಟ್ ಮಾಡ್ತೀರಲ್ವಾ....!)

ಕನ್ನಡ ಚಿತ್ರ ರಂಗಕ್ಕೊಂದು ಹೆಮ್ಮೆಯ ಚಿತ್ರ ನಾನು ನನ್ನ ಕನಸು, ಇಲ್ಲಿ ಭಾವನೆಗಳಿಗೊಂದು ಜಾಗವಿದೆ, ಇಂತಹ ಚಿತ್ರಗಳನ್ನು ಸ್ವತಹ ರೂಪಿಸುವುದು ಬಿಡಿ, ಪರಿವರ್ತಿಸುವುದರ ಕಡೆಗೂ ಯಾರೂ ಗಮನ ಹರಿಸುವುದಿಲ್ಲ, ಆದರೆ ಅಂತಹ ಒಂದು ಪ್ರಯತ್ನ ನಮ್ಮ ಪ್ರಕಾಶ್ ರೈ ಮಾಡಿದ್ದಾರೆ, ಜೀವನದ ಹಾದಿಯ ಕನಸುಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೆಲುಕು ಹಾಕುವ ಪ್ರಯತ್ನವನ್ನು ಪ್ರತಿಯೊಬ್ಬ ತಂದೆಗೂ ಒಂದು ಚಿತ್ರದ ಮೂಲಕ ಮಾಡಿ ಕೊಟ್ಟಿದ್ದಾರೆ, ಪ್ರಕಾಶ್ ರೈ ಅವರ ಜೊತೆ ರಮೇಶ್ ಅರವಿಂದ್ ಕೂಡಾ ಉತ್ತಮ ಸಾತ್ ನೀಡಿದ್ದಾರೆ,

ಪ್ರಕಾಶ್ ರೈ ನಿರ್ಮಾಣದ ನಾನು ನನ್ನ ಕನಸು ಚಿತ್ರ ನೊಡಿದ ಬಳಿಕ ನನ್ನಲ್ಲೆ ಓಂದು ರೀತಿಯ ಕನಸು ಮನೆ ಮಾಡಿದೆ, ಸಾಮಾನ್ಯವಾಗಿ ಯಾವ ಚಿತ್ರವೂ ಅಷ್ಟು ಬೇಗ ಹಿಡಿಸುವುದಿಲ್ಲವಾದರೂ ಈ ಚಿತ್ರ ನನ್ನ ಮನದೊಳಗೆ ಏನೋ ಮುಂದಿನ ಜೀವನವನ್ನು ನೆನಪಿಸಿದಂತಾಗಿದೆ, , ಇತ್ತೀಚೆಗೆ ಮದುವೆಯಾದ ನನ್ನ ಸ್ನೆಹಿತನ ಮಾತಿಗೆ ಮರುಳಾಗಿ ಸನ್ಯಾಸಿಯಾಗೋಣ ಅಂದು ಕೊಂಡಿದ್ದೆ ನಾನು ನನ್ನ ಕನಸು ಚಿತ್ರದ ನಂತರ ಸಂಸಾರ ಜೀವನದ ಕಾಮನಬಿಲ್ಲನ್ನು ಕಾಯುತ್ತಿದ್ದೇನೆ, ಅಪ್ಪನಾಗೋದು, ಒಂದು ಪುಟ್ಟ ಮಗು ಅದರ ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲುಗಳನ್ನು ಗಲ್ಲಕ್ಕೆ ತಾಗಿಸಿಕೊಂಡು ಮುದ್ದಾಡೋದು, ಆ ಮಗುವಿನ ಹಾಲು ಹೆಜ್ಜೆಯಲ್ಲಿ ಅದರ ಮುಗ್ದ ನಗು ಅಪ್ಪನ ಎಲ್ಲಾ ನೋವನ್ನೊ ಗಾಳಿಯಲ್ಲಿ ತೂರುತ್ತದೆ, ಆದರೂ ಜೀವನದಲ್ಲಿ ಸಿಹಿಯೊಡನೆ ಸ್ವಲ್ಪ ಕಹಿ ಇಲ್ಲವಾದರೆ ಸಿಹಿ ರೋಗ ಬರಬಹುದು...ಇಲ್ಲೂ ಅಷ್ಟೆ ಕನಸು (ಮಗಳು) ಪುಟ್ಟ ಹೆಜ್ಜೆ ಇಡೋವಾಗ ಮುದ್ದಾಡುತ್ತಾ ಶಾಲೆಯ ಅಂಗಳದವರೆಗೆ ಬಿಟ್ಟು ಟಾ ಟಾ ಮಾಡಿದಾಗ ಆಕೆ ಪುನಹ ಮರಳಿ ಬರುವವರೆಗೆ ಆಕೆಯ ನೆನಪು ಕಾಡುತ್ತಿರುತ್ತದೆ, ಕನಸು ದೊಡ್ದವಳಾದಾಗ ಸೈಕಲ್ ತೆಗಿಸಿ ಕೊಡುವುದು ಸ್ವಲ್ಪ ಆಲೋಚಿಸುವ ಕಡೆಗೆ ಗಮನ ಕೊಡುತ್ತದೆ. ಸೈಕಲ್ ನ ನಂತರ ಆಕೆಯ ಜೊತೆ ಬೆರೆತು ಟಾ ಟಾ ಮಾಡುವುದು ಮೋಡ ಸರಿಯುವಂತೆ ದೂರಾಗುತ್ತದೆ , ಆದರೂ ಮಗಳ ತುಟಿಯು ಪ್ಲೀಸ್ ಪಾ..ಅಂದಾಗ ತೆಗಿಸಿ ಕೊಡಲೇ ಬೇಕು ಅನಿಸುವುದು ಅವಳ ಆಸೆಯ ಪೂರೈಸುವಿಕೆಯ ಹಿಂದೆ ನನಗೋ ಸ್ವಲ್ಪ ಮಟ್ಟಿಗಿರುವ ಸಮಾದಾನ! ಮಗಳು ನನ್ನ ತೋಳಲ್ಲಿ ಕಾಲುಗಳಿಂದ ಗಲ್ಲವನ್ನು ಒದೆಯುತ್ತಾ ಇದ್ದಾಗ, ಅಲ್ಪ ಸ್ವಲ್ಪ ಅತ್ತಾಗ, ಕೊಂಚ ನಡೆದಾಗ, ಹಟ ಮಾಡಿದಾಗ ತಂದೆ ಎಂಬ ಹೆಮ್ಮೆಯ ಸಮಾದಾನ ಇರುತ್ತದೆ "ನಾನು ನನ್ನಲ್ಲಿ ಅರಳಿದ ಸುಕವೆಂಬ ಕನಸು" ಪುಡಿಯಾಗುವುದು ಆಕೆಗೆ ಮತ್ತೊಬ್ಬನಲ್ಲಿ ಪ್ರೀತಿ ಹತ್ತಿರವಾದಾಗ,

ಸಂಪೂರ್ಣ ಚಿತ್ರ ನೋಡಿದ ಬಳಿಕ ನನಗೆ ಅನಿಸಿದ್ದು ನಮ್ಮ ತಂದೆ ತಾಯಿ ಕೊಡಾ ನಮ್ಮ ಬಗ್ಗೆ ಎಷ್ಟೊಂದು ಕನಸುಗಳನ್ನು ಕಂಡಿದ್ದರು ಅನ್ನುವುದರ ಬಗ್ಗೆ! ನನ್ನ ಮೇಲೆ ನಾನು ಟೀ ಚೆಲ್ಲಿಕೊಂಡಾಗ ಅವರು ಕೊಟ್ಟ ಏಟಿನ ಹಿಂದೆ ಪ್ರೀತಿ ಇತ್ತು ಎಂಬೋದು ನನಗೆ ಅರಿವಾಗಲೇ ಇಲ್ಲ, ಇಂದು ಪ್ರಕಾಶ್ ರೈ ರವರ ನಾನು ನನ್ನ ಕನಸು ಚಿತ್ರ ನೋಡುತ್ತಿದ್ದಂತೆಯೇ ನಾನೊಮ್ಮೆ ಅಪ್ಪನಾಗಿ ಕನಸು ಕಂಡೆ, ನಾನು ಆಡಿದ ಜಾರು ಬಂಡಿ ಆಟ, ಮರ ಹತ್ತಿ ಕಾಲು ಮುರಿದು ಕೊಂಡಾಗ ಅತ್ತಿದ್ದು, ಒಂದು ರುಪಾಯಿ ಪೆಪ್ಪರ್ ಮಿಂಟ್ ಗೆ ರಾದ್ದಾಂತ ಮಾಡಿದ್ದು ,ಮೊದ ಮೊದಲು ಮೀಸೆ ಬೋಳಿಸಿಕೊಂಡಾಗ ನಾಚಿಕೆಯಾಗಿದ್ದು, ಇವುಗಳ ಮುದ ನನ್ನನ್ನು ಈಗ ಕಾಡುತ್ತಿದೆ, ಈ ಎಲ್ಲಾ ಸುಂದರ ನೆನಪುಗಳನ್ನು ನನಗೆ ಮರು ಮೆಲುಕು ಹಾಕಿಸಿದ್ದು ನಾನು ನನ್ನ ಕನಸು ಚಿತ್ರ , ಅಲ್ಲದೆ ಪ್ರತಿಯೊಬ್ಬ ಅಪ್ಪನ ಜವಾಬ್ದಾರಿ,ಆಸೆಯ ಮಿತಿಗಳನ್ನು ಪುನಹ ವಿಮರ್ಶಿಸುವ ಆಸಕ್ತಿಗೆ ಎಡೆ ಮಾಡಿ ಕೊಟ್ಟ ಪ್ರಕಾಶ್ ರೈ ಅವರಿಗೆ ನನ್ನ ಪುಟ್ಟ ಪುಟ್ಟ ಸಲಾಮ್...





Friday, May 20, 2011

ಕಣ್ಣೀರೇ ಕನಸಾಯಿತು.......
















ಅಂದಕೆ ಕರಗಲಿಲ್ಲ ಚಂದಕೆ ಮಣಿಯಲಿಲ್ಲ ಏನೊ ಬಯಸದೆ ಅದು ಹೇಗೆ ಬಂತೋ ಪ್ರೀತಿ

ನೆಟ್ಟ ತೋರಣದ ಮಡಿಲಲ್ಲಿ ದಿಟ್ಟ ಹಸಿರಿನ ಸೊಬಗು ಮರುಳು ಮಾಡಿತೇ ಮನವನು

ಪ್ರೀತಿ ವರ್ಣಿಸಲಾಗದು ಅವಳಂದ ಬಣ್ಣಿಸಲಾಗದು ಕನಸಿನ ಕಣ್ಣಿನ ರೆಪ್ಪೆ ಮುಚ್ಚುವುದೆಂತು

ಮುಂದವಳ ವರ್ಣಿಸಲು ಹೋಲಿಕೆಗಳೇ ಇರಲಿಲ್ಲ ಎಲ್ಲವೂ ಮುಗಿದಿತ್ತು ಪುಟದೊಳಗಿನ ಕವನದೊಳು

ಯಾರದೊ ಪ್ರೀತಿ ಕಂಡು ಹುಚ್ಚೆಂದ ಈ ಮನವು ಎನ್ನುದರದ ಪ್ರೀತಿಗೆ ಶರಣಾಯಿತು

ಆಕೆ ನಗುವಿನ ಗಾಳಿ ಎಸೆದಾಗ ಮೊದಲು ಸ್ನೇಹದೊಳಿದ್ದ ನಂಟು ಎಂಟಾಯಿತು

ನಾನೇನೂ ಮೊದಲಿಗನಲ್ಲ ಅವಳೇ ಮೊದಲಿಗಳು ನೀರ ಹಾರಿ ಹೊವೆತ್ತಿದಷ್ಟಕ್ಕೆ ಪೆಚ್ಚಾದಳು

ಹೆಸರೇನು ಸೌಖ್ಯವೇನು ಕೊನೆಗೆ ಖಾಲಿ ಇದೆಯೇ ಪ್ರೀತಿಯ ಮನೆ ಅಂದಾಗ ನಾ ಪೆಚ್ಚಾದೆ

ಇರುಳೆಲ್ಲಾ ರೆಪ್ಪೆ ಮುಚ್ಚಿ ಕಾಣುವ ಕನಸು ನಿದ್ದೆ ಬಾರದೆ ಕಾಡ ತೊಡಗಿತು

ಮುಂಜಾನೆ ದೇವರ ನೋಡುವ ಹೊರತು ಎನ್ನೀ ನಯನ ಎನ್ನವಳ ಬಿಂಬವನು ತುಂಬಿಸಿತ್ತು

ಬಡತನವ ಹೇಳಿದ್ದೆ ಮನದ ಸಿರಿತನವ ವರ್ಣಿಸಿದ್ದೆ ಗಳ್ಳನೆ ಸುರಿದ ಕಣ್ಣೀರಲ್ಲೇ ಉತ್ತರದ ಚಾಪಿತ್ತು

ಎದೆಗೆ ಮುಡಿ ಇಟ್ಟು ರೆಪ್ಪೆ ಮುಚ್ಚಿದಳು ಉಸಿರು ನಿಂತರೊ ಭಯವಿಲ್ಲ ಸುಂದರ ಸಾವ ಗೊಣಗಿದಳು

ಮುಳ್ಳ ಲೆಕ್ಕಿಸದೆ ಒಡೆಯ ಹೂವ ಕೀಳುವ ಕನವು! ಕಣ್ಣ ತುಂಬಿಸಿ ಎನ್ನವಳ ಬಿಗಿದು ಬಾಚಿತ್ತು

ಬಡತನಕೆ ಹೆದರಿದರೊ ಪ್ರೀತಿ ದೂಕಿತ್ತು ಇತ್ತಿಂದತ್ತ ಅತ್ತೆ ಮಾವನ ಮನೆಗೆ ಹೆಣ್ಣು ಕೇಳಲು

ಕುಳ್ಳಿರಿಸಿದರು ಪಾನೀಯ ಉಪಚರಿಸಿದರು ಪ್ರೀತಿ ವಿವರಿಸಲು ಎದೆ ಬಡಿತ ಉಸಿರ ಹಿಡಿದಿತ್ತು

ಎನ್ನವಳನೊ ಮುಂದಿರಿಸಿ ಬಗೆ ಬಗೆಯಾಗಿ ಮಗಳ ಮೇಲಿರುವ ಸಂಮ್ಮಂದದ ಸ್ವಚ್ಚತೆಯನು ಬಿಡಿಸಿದೆ

ಎನ್ನ ಬದುಕ ಹಿಂದೆಗಳೀಗೆ ಸಮ್ಮತಿ ಇಲ್ಲವಾದರೊ ಮಗಳ ಸುಖವೇ ನಮ್ಮ ಸುಖ ಎಂಬ ಮಾತು ಎನ್ನುಸಿರ ಸ್ಠಿರವಾಗಿಸಿತ್ತು

ಹರೆಯದಲ್ಲೇ ಪ್ರೇಮದ ಕನಸು ನನಸಾಯಿತು ಎನ್ನ ಹೆಜ್ಜೆಯಲಿ ಅವಳ ಹೆಜ್ಜೆ ಬೆರೆತಾಯಿತು

ಮಧುಮಂಚಕೆ ಬೀರಿತು ಬಿಡಿ ಕುಸುಮದ ಇಂಚರ ಗಿರಿ ಗಗನವೇ ಹಾಡಿದು ನಾದ ಸಪ್ತಸ್ವರ

ಮಲೆನಾಡಿಗೆ ಬಂದೆ ಸೌಂದರ್ಯ ಸವೆಯಲು ಪ್ರೇಮದ ಕವಿತೆಗೆ ನಾದವನು ಬೆರೆಸಲು

ದಿನ ಕಳೆದಂತೆ ಎನ್ನವಳ ಹಠ ಕಂಡು ಸುಕಿಸಿದ್ದೆ ನಗು ಕಂಡು ಸೋತಿದ್ದೆ

ವರ್ಷಗಳು ಮೊರಾಯಿತು, ಅತ್ತೆ ಮಾವ ಮಗಳ ಕಾಣಲು ತುಂಬಿದ ಗಾಡಿಯಿಂದಿಳಿದಾಯಿತು

ಆಸೆಯೇ ಇಲ್ಲದ ಅತ್ತೆಗೆ ಮೊಮ್ಮಗನ ತೊಗಿ ಮುದ್ದಾಡುವ ಹಂಬಲವಂತೆ

ಕನಸುಗಳೇ ಇರದ ಮಾವನಿಗೆ ಮೊಮ್ಮಗಳ ಕೊಂಡಾಡುವ ಬಯಕೆಯಂತೆ

ಒಂದಿರುಳ ಮಂದ ಬೆಳಕಿನೊಳು ಸೊಜಿಯು ಎನ್ನವಳ ಬೆರಳ ರಕ್ತವನು ಹೊರ ಕರೆದಿತ್ತು

ಕೈಯ್ಯ ಗಾಜನು ಬಿಟ್ಟು ಎನ್ನವಳ ಬೆರಳ ಬಾಯಲಿಟ್ಟು ಚುಂಬಿಸಿದೆ

ಜೋಡಿ ಪ್ರೀತಿಗೆ ಕರಗಿ ಅತ್ತೆ ಮಾವರ ಕಣ್ಣೀರು ನೆಲವ ಸೋಕಿ ಆಶೀರ್ವದಿಸಿತ್ತು

ಮಗಳ ನೊವನು ಅರಿತು ಎನ್ನೊಳು ಮಾತಿಗಿಳಿದ ಅತ್ತೆ ಮೊಮ್ಮಗನ ಅಳುವಿಗೆ ದಿನ ಕೇಳಿದಳು

ಎಳೆದೇ ಹೋದರು ದವಾಖಾನೆಗೆ ಕಣ್ಣೀರೊಳು ಅವಿತಿಟ್ಟೆ ಕೆಲವೊಂದು ಸತ್ಯಗಳ ಎನ್ನ ಉದರದೊಳಗೆ

ಮನೆಯವರೆಲ್ಲ ಸೇರಿ ಬಗೆಬಗೆಯಾಗಿ ನೋಯಿಸಿದರು ಛಲಕೆ ಶರಣಾಗಿ ಎನ್ನುದರ ಬಿಚ್ಚಿದೆ

ನಾವಿಬ್ಬರೊ ಪ್ರೇಮಿಗಳಷ್ಟೆ ಪ್ರೀತಿ ಹಂಚಿದೆವು ದೇಹ ಹಂಚಲಿಲ್ಲ

ಮುತ್ತಿ ಮುದ್ದಾಡಿದ್ದರೊ ಪ್ರೀತಿ ಕಂಪಿಸಿತ್ತು ದೇಹ ಕಂಪಿಸಲಿಲ್ಲ

ಮಗು ಬೇಕೆಂಬ ಹಂಬಲ ನಮಗೆ ನಿಮಗಿದ್ದರೊ ಆ ವಿದಿಗೆ ಇರಬೇಕಲ್ಲ

ನಾ ಮುಚ್ಚಿಟ್ಟ ಸತ್ಯವಿಷ್ಟೆ ಎನ್ನವಳು ಇನ್ನಿರುವುದು ಎರಡು ಮಾಸಗಳ ಕಾಲ

ಈ ಎರಡು ಮಾಸಗಳು ಎನಗೆ ನೊರು ವರ್ಷಗಳು ನಾ ಇನ್ನೊ ಪ್ರೀತಿಸಬೆಕು ಕಾಲ ಬೆರಗಾಗುವಷ್ಟು

ಎನ್ನವಳ ಕೊನೆಯು ಅವಳ ಮನಕೆ ತಿಳಿದಿಲ್ಲ ಬಿತ್ತದಿರಿ ಆಸೆಗಳ ಬಿಳಿ ಮಂಜನು

ಇನ್ನೊ ಮುಂದೆ ಎನಗೆ ವಿವರಿಸಲು ನಾಲಗೆ ತೆವಳುತಿಲ್ಲ ತುಟಿಗಳು ತೇವವಿಲ್ಲ

ನಾ ನತದ್ರುಷ್ಟನೊ ಬದುಕು ಬಣ್ಣದ ಖಡ್ಗವೋ ಅದರ ಹರಿತಕೆ ನಾ ಚೊರು ಚೊರಾದೆ

ನೆನಪುಗಳ ಕಹಿಯಲಿ ದೇಹ ಕಲ್ಲಾದಾಗ ಅತ್ತೆ ಮಾವರ ಹಣೆಯು ಎನ್ನ ಪಾದವ ಮುದ್ದಿಸಿತ್ತು

ಹುಚ್ಚುತನಕೆ ಆಡಿ ಅವರಿಬ್ಬರ ದೇಹವ ಎನ್ನ ಕರಗಳು ಅಪ್ಪಿ ಬೆಚ್ಚಗೆ ಬಂದಿಸಿತ್ತು

ಅದು ಕೊನೆಯ ದಿನ ಎನ್ನವಳೀಗೆ ಎನ್ನ ಬಾಚಿ ಮುದ್ದಾಡುವ ತುಮುಲವಂತೆ

ಮತ್ತೆ ಮುಡಿಯ ಎನ್ನೆದೆಗೆ ಒರಗಿಸಿ ರೆಪ್ಪೆ ಮುಚ್ಚಿದಳು

ಕಾದೇ ಕುಳಿತೆ ಮತ್ತೆ ರೆಪ್ಪೆ ಕಂಪಿಸುವುದೆ ಪ್ರೀತಿ ಎನ್ನರಸುವುದೇ................................................









































Thursday, April 21, 2011








ಗೊಂದಲದೊಳಗೊಂದು ಹಂಬಲ

ಬರೆಯಲೇಬೇಕೆಂದು ಹೊರಟೆ
ಏನು ಬರೆಯಲಿ ಯಾರ ಬರೆಯಲಿ?
ಸ್ವಲ್ಪ ಹೊಸದು ಬೇಕಿತ್ತು,ಕಾಣುವುದೆಲ್ಲಾ ಹಳೆಯದಾಗಿತ್ತು
ಹೆಣ್ಣು,ಹೊಣ್ಣು,ಮಣ್ಣು ಮನ ಗೊಂದಲದಲ್ಲಿತ್ತು..


ಮೊದಲ ಕವನ ಚಿಗುರಿದಾಗ
ಕಾಲ ಬುಡದಲ್ಲಿ ಗೀಚಿ ಹರಿದು ಎಸೆದ ಕಸವಿತ್ತು
ಚಿಗುರಿದ ಕವನ ಅರಳುವ ಹೊತ್ತು
ಮನ ಸುಂದರ ಪದಗಳ ಹೊಂದಿಸುವ ಗೊಂದಲದಲ್ಲಿತ್ತು


ಚುಕ್ಕೆ ಚಿತ್ತಾರಗಳ ವರ್ಣಿಸಲೇ
ಹಕ್ಕಿ ಆಗಸವನೊ ಬೆರೆಸಲೇ
ಸುತ್ತ ಮುತ್ತ ಕಾಡು ಕಡಲು ಕೇವಲ ಚಿತ್ರವೇ?
ವಿಚಿತ್ರ ನಾಡಿನ ಹಗಲು - ಇರುಳಿನಲಿ
ಕಪ್ಪು ಬಿಳುಪಿನ ಬಾಳೊಂದು ಬಣ್ಣವೇ?


ಜೀವಿಗಳಿಗಿರುವ ಕಿಚ್ಚು ಮತ್ಸರ?
ಗಾಳಿ-ನೀರಿಗೇಕಿಲ್ಲ?
ಜೀವಿಗಳನು ಚುಚ್ಚುವ ಕುಸುಮದ ಮುಳ್ಳು
ದುಂಬಿಯನೇಕೆ ಚುಚ್ಚಲಿಲ್ಲ?
ನಿನ್ನೆಯ ಪುಠಗಳು ತುಂಬಿತ್ತು
ನಾಳೆಯದೇಕೆ ಖಾಲಿ ಖಾಲಿ.............?







Thursday, March 10, 2011

ಸಾಗರದ ಅಲೆಯಲ್ಲಿ ನನ್ನವಳ ಕಂಡ ಕನಸು....!

ಕಲ್ಪನೆಯ ಮೋಡದಲ್ಲಿ

ಸುಂದರ ಬಾಲ ಬಾಲ್ಯದಲ್ಲಿ ಈಸಿದ್ದೇನು? ಈಸಿ ಜಯಿಸಿದ್ದೇನು? ಬರೀ ನಾಟಕೀಯ ತುಣುಕುಗಳ ನೆನಪಷ್ಟೆ! ಪ್ರೀತಿಯಿಂದ ಹಡೆದಳು ನಮ್ಮವ್ವ, ಜೋಗುಳ, ಕಂದಮ್ಮ, ಇಂತೆಲ್ಲ ಕವನ ಕಾದಂಬರಿಗಳಿಂದ ಬಾಲ್ಯವನ್ನು ಮುದ್ದಿಸಿದ್ದೆಷ್ಟೋ ಅರಿಯೆ! ಮಗು ನಕ್ಕಾಗ,ಕೆನ್ನೆ ಕೆಂಪಿದ್ದಾಗ, ಮೆಲ್ಲನೆ ಅಮ್ಮಾ ಎಂದು ಮೆಲ್ಲಿದಾಗ ಅಮ್ಮನ ಆನಂದವೆಷ್ಟೋ ವರ್ಣಿಸಲಾಗದು, ಸ್ವಲ್ಪ ತುಂಟಾಟಿಕೆ ಮಿತಿ ಮೀರಿದಾಗ ಆಕೆ ಪ್ರೀತಿಯಿಂದ ಅಬ್ಬರಿಸುವುದರಲ್ಲಿ ತಪ್ಪೇನಿದೆ ಅಲ್ವೇ..? ಆದರೊ ಆ ಪ್ರೀತಿಯ ಹೊಡೆತವನ್ನು ಪ್ರೀತಿಯಿಂದಲೇ ಸಹಿಸುವವರಾರು? ಮೀಸೆ ಬಂದಾಗ ಲೋಕ ಕಾಣುವುದಿಲ್ಲ ಅನ್ನೋದು ಸುಳ್ಳಲ್ಲ ಅಲ್ಲವೇ? ಅಮ್ಮ ಮುದ್ದಿಸಿದ್ದು, ಅಮ್ಮನ ಮುತ್ತನ್ನು ಮರೆತಿದ್ದು ಇದೆಲ್ಲಾ ಮಾನವ ಹೆಚ್ಚು ಸುಖವನ್ನು ಪಡೆಯಲು ಹೊರಟಾಗ ಅವನ ಮನದಲ್ಲಿ ಮೊಡುವ ಕನಸಿನ ಕಾದಂಬರಿ. ಅಮ್ಮನಿಂದ ಕೈ ತುತ್ತು ತಿನ್ನುವ ಹೊತ್ತು ಕಳೆದರೆ ಸಾಕು ದೇಶ ಸುತ್ತಿ ಕೋಶ ಓದುವ ಬಯಕೆ, ಕಣ್ಣು ಮನಸ್ಸು ಇಷ್ಟ ಪಟ್ಟಿದ್ದನ್ನು ಕೊಂಡುಕೊಳ್ಳುವ ಆಸೆ, ನನ್ನವಳ ಬಗ್ಗೆ ನೆನೆದಾಗ ಹೆಣ್ಣು ತಪ್ಪಿಲ್ಲ, ತಪ್ಪು ಎನ್ನುವ ದಾರವನ್ನು ಗಂಡು ಹೆಣೆದಿಲ್ಲ, ಎಲ್ಲವನ್ನೊ ಕಾಲ ಸಂದರ್ಭಗಳೆಂಬ ಸಹಜತೆ ಅಲ್ಲೋಲ ಕಲ್ಲೋಲವಾಗಿಸಿದ್ದು ಅನಿಸುತ್ತಿದೆ!

ನನ್ನವಳು ಅಂತಹ ಹಾಲು ವಯಸ್ಸಿನಲ್ಲೂ ಮುಂಜಾನೆ ಎದ್ದು, ಸಂಧ್ಯಾವಂದನೆ ಮುಗಿಸಿ,ನಮಿಸಿ, ಸುಂದರ ಕನಸುಗಳ ತಂತಿಯನ್ನು ಮೀಟಿ ಆನಂದಿಸುತ್ತಿದ್ದಳು, ಮುಂಜಾನೆಯ ಸವಿ ತಂಗಾಳಿ ಮೈಗೆ ಸೋಕುವುದನ್ನು ಅನುಭವಿಸುತ್ತಾ ಆನುಭವವನ್ನು ಅಮ್ಮನಲ್ಲಿ ಹಂಚುತ್ತಾ, ಕಮಲದಿಂದ ದುಂಬಿ ಮಕರಂದವನ್ನು ಹೀರುವ ಸೊಬಗನ್ನು ಮನದಲ್ಲೇ ಹಾಡುತ್ತಿದ್ದಳು. ಅವಳಿಗೊ ದುಂಬಿಯಾಗುವ ಬಯಕೆಯಂತೆ, ಸಂಜೆಯ ಕೆಂಪುಬಣ್ಣದ ಆಗಸದ ತೇರಿನಲ್ಲಿ ಸಾಲು ಸಾಲಾಗಿ ಹಾರುವ ಹಕ್ಕಿಗಳ ದಿಂಡನ್ನು ನೋಡು ನೋಡುತ್ತಾ, ನನಗೊ ಹಕ್ಕಿಯಾಗಬಾರದಿತ್ತೇ?, ನಾನು ಅವುಗಳ ಜೊತೆ ಹಾರಬಾರದಿತ್ತೆ ಅನ್ನೋ ಕನಸುಗಳನ್ನು ಬಿತ್ತುತ್ತಿದ್ದಳು. ಹೀಗಿದ್ದ ನನ್ನಾಕೆ ಮೊದಲು ಮರೆತಿದ್ದು ಅಮ್ಮನನ್ನು! ನಂತರ ಮರೆತಿದ್ದು ನನ್ನನ್ನು!

ಪ್ರೀತಿಯ ಮಹಲ್ ಕಟ್ಟಲು ಎಷ್ಟೋ ವರ್ಷಗಳು ಬೇಕು,ಅದೇ ಮಹಲ್ ಒಡೆದು ಹೋಗಲು ಒಂದು ನಿಮಿಷ ಸಾಕು! ಪ್ರೀತಿ ಹುಟ್ಟು ಹಾಕಲು ಕೆಲವೇ ಕವಲುಗಳಿದ್ದರೆ, ಒಡೆದು ಹೋಗಲು ನೊರಾರು ಕವಲುಗಳು ! ಹಾಗೆಂದು ನಾ ಕಟ್ಟಿದ ಪ್ರೀತಿಯ ಸೌಧ ಯಾರೋ,ಹೇಗೋ ಎಂಬ ಒತ್ತಾಯಕ್ಕೆ ರಚನೆಯಾಗಿಲ್ಲ, ಅಲ್ಲಿ ಸುಂದರ ಭಾವನೆಗಳಿತ್ತು,ಸುಂದರ ಕನಸುಗಳಿತ್ತು,ಬಾಲ್ಯದ ಬದುಕಿನ ನೆನಪುಗಳಿತ್ತು,ಪುಟ್ಟ ಪುಟ್ಟ ಹೆಜ್ಜೆಯ ಗುರುತುಗಳಿತ್ತು! ನನ್ನವಳು ನೆಲ ಸೋಕುವ ದಾವಣಿಯ ಅಂಚನ್ನು ಎತ್ತಿ ಹಿಡಿದು ಕುಂಟೆ ಬಿಲ್ಲೆ ಆಡುವಾಗ ಎಡವಿ ಬಿದ್ದಳು, ನಾನು ಅಡಿಕೆ ಗರಿಯಲ್ಲಿ ಎಳೆದಾಗ ಜಾರಿ ಬಿದ್ದಳು, ನೆಲ್ಲಿ ಕಾಯಿ ಕೀಳುವಾಗ ಕೆಳಬಿದ್ದಳು, ಎಲ್ಲಿ, ಹೇಗೆ ಬಿದ್ದರೊ ಸಹಿಸಲಾಗದ ನೋವಾಗಿತ್ತು! ಇನ್ನು ನನ್ನಾಕೆ ತನ್ನ ಹರೆಯದ ಬದುಕಲ್ಲೇ ಎಡವಿದಾಗ, ಬಾಲ್ಯದ ನಂತರವೊ ಪರರೊಡನೆ ಬೆತ್ತಲಾದಾಗ ನಾನೇಕೆ ಮೌನವಾದೆ? ನನ್ನ ನಯನಗಳೇಕೆ ಕಣ್ಣೀರನ್ನು ಹರಿಯ ಬಿಡಲಿಲ್ಲ,ದೇಹವೇಕೆ ಕಲ್ಲಾಯಿತು? ಆಕೆ ಆ ರೀತಿ ವರ್ತಿಸುವ ಕಾರಣವಾದರೊ ಏನು? ನಾನು ನನ್ನ ಕನಸುಗಳು ಸುಳ್ಳೆ? ಭಾವನೆಗಳು ಸುಳ್ಳೆ? ನನ್ನವಳು ನನಗಾಗಿ ಸುರಿದ ಪ್ರೀತಿ ತುಂಬಿದ ಕಣ್ಣೀರು ಸುಳ್ಳೆ?

ಬಾಳ ಮೊದಲ ಬೇಟಿಯಲ್ಲಿ ನನ್ನವಳನ್ನು ಪ್ರೀತಿಯ ಮಂದಿರದಲ್ಲಿ ಕಂಡೆ, ಬಾಳ ಮಗದೊಂದು ಭೇಟಿಯಲ್ಲಿ ನನ್ನವಳನ್ನು ಕಂಡಾಗ ಆಕೆಯ ಕಣ್ಣುಗಳು ಬಾಡಿತ್ತು,ತುಟಿ ಒಣಗಿತ್ತು, ಗಲ್ಲ ನಗುವಿನ ಗಾಳಿ ಸೋಕದೆ ಕುಂದಿತ್ತು ಅಂದರೆ ಅದಾಗಲೇ ಆಕೆಯ ದೇಹವೆಂಬ ಆಸ್ತಿಯ ಪತ್ರ ಮತ್ತೊಬ್ಬರದ್ದಾಗಿತ್ತು, ಮತ್ತೆ ನನ್ನವಳ ಭೇಟಿ ಎಲ್ಲಿ ಹೇಗಾಗುತ್ತೋ ತಿಳಿದಿರಲಿಲ್ಲ.ಆದರೊ ಎದೆಯೊಳಗಿನ ಪ್ರೀತಿ ಕುಂದಲೇ ಇಲ್ಲ,
ಮುಂದೇನಾಯಿತು? ಪ್ರೀತಿ ಬೇಡವೆನಿಸಿತೇ? ಬದುಕು ಸಾಕೆನಿಸಿತೇ? ನಾನು ಎಲ್ಲವನ್ನೊ ಸಹಿಸಲು ಉಸಿರುಹಿಡಿಯುವ ಪ್ರಯತ್ನದಲ್ಲಿದ್ದಾಗ ಎಲ್ಲಾ ನೋವು,ದುಗುಡ,ದುಮ್ಮಾನಗಳನ್ನು ಕಾಲವೆಂಬ ಕವಡೆ ಮಗುಚಿ ಹಾಕಿತ್ತು, ಕೆಲವೊಂದು ಆಕಸ್ಮಿಕ ಅನುಭವಗಳಿಂದ ಸಮುದ್ರದ ಅಲೆಗಳು ಪ್ರತೀ ನಿಮಿಷಕ್ಕೊ ದಡವನ್ನು ತಟ್ಟುವ ಕಾರಣದ ಅನುಭವವಾಯಿತು. ದಿನಗಳು ಉರುಳಿತ್ತು, ಕತ್ತಲೆಯ ಕಾವಿನಲ್ಲಿ ಒಂದೊಮ್ಮೆ ಮೈ ಬೆವರಿತ್ತು, ನೆನಪುಗಳು ಚುಚ್ಚುವಾಗ ಮತ್ತೆ ಮತ್ತೆಗೆ ಅದೇನೊ ಹೊಸತೆನಿಸಲಿಲ್ಲ ಎಲ್ಲವೊ ಅಭ್ಯಾಸ ಅನ್ನುವ ತಾಳಕ್ಕೆ ಕುಣಿಯುವ ಗೊಂಬೆಯಾಯಿತು.ಸಹೋದರಿಯೊ ನನ್ನ ಮುರುಕಲು ಮನಕ್ಕೆ ಬುದ್ದಿಮಾತುಗಳನ್ನು ಚಡಪಡಿಸುತ್ತಾ ಕೆಂಪಾಗಿದ್ದಳು,

ಅದೊಂದು ದಿನ ಸಾಗರದ ಅಂಚಿನಲ್ಲಿ ಕೂತಾಗ ಬಾನಂಚಿನಲ್ಲಿ ಸುಂದರ ಸಂಜೆಯ ಕಂಪನ್ನು ಸವಿಯುತ್ತಾ, ಮೋಡಗಳು ಬಾನನ್ನು ತಬ್ಬಿ ಆಲಂಗಿಸಿದಾಗ, ಅಲೆಗಳು ನನ್ನ ಪಾದದ ವರೆಗೊ ಬಂದು ಹಿಂದೆ ಸರಿದಾಗ ನನ್ನವಳ ನೆನಪಾಗದಿರಲಿಲ್ಲ ಬಾಳಿನಲ್ಲಿ ಎರಡು ಬೇಟಿಗಳನ್ನೊ ಮುಗಿಸಿ ಮೊರನೆಯದೆಂತೋ ಎಂದು ದಡಕ್ಕೆ ಬಾಗಿದಾಗ, ಅಲ್ಲಿದ್ದ ಕೆಲವೊಬ್ಬರು ಸಾಗರ ತೀರದಲ್ಲಿ ಗುಂಪಾಗಿದ್ದರು, ಸಹೋದರಿಯೊ ಕೊಡಾ ಯಾರೋ ನಮಗೇಕೆ? ಶುದ್ದ ಮನಸ್ಸುಗಳ ಪ್ರೀತಿಗೆ ಅಂತ್ಯ ಈ ರೀತಿಯೇ ಕಹಿಯಾಗಿರುತ್ತದೆ! ಯಾವುದೋ ಹುಡುಗಿ ಕನಸುಗಳೆಂಬ ನೀರಿನ ಹಾಸಿಗೆಯಲ್ಲಿ ತೇಲುತ್ತಿದ್ದಾಳೆ ಅಂದಳು, ಎಲ್ಲರ ಕೈಗಳೊ ಕೂಡಾ ಕೊಳೆತ ಗಂಧಕ್ಕೆ ನಾಸಿಕವನ್ನು ಮುಚ್ಚಿಸಿತ್ತು,,! ನಾ ಮೆಲ್ಲನೆ ನಡೆದು ತಲೆಯೆತ್ತಿದಾಗ.......
ಸಹೋದರಿಯ ಅದು ನಿನ್ನವಳಲ್ಲ ಅನ್ನೊ ಮಾತಿಗೆ ಎನ್ನ ಮನದ ಪ್ರೀತಿಯ ಮಂದಿರ ಅದು ಎನ್ನವಳೇ ಎಂದು ಸಾರಿ ಸಾರಿ ಹೇಳಿತ್ತು, ಕಾಲ ಉರುಳಿತ್ತು,ಬಾಳು ಮುಗಿದಿತ್ತು, ಅಂದಲ್ಲಿ ಬಾಳು ಬೆತ್ತಲೆ ನಡಿಗೆ, ಸಂಜೆ ಕತ್ತಲೆಡೆಗೆ....

ಲೋಕು ಕುಡ್ಲ..

(lokukudla@gmail.com)
* * * *















Friday, February 18, 2011

ಭಾವನೆಯ ಮೊಡದಲ್ಲಿ ಕೊನೆಯಿಲ್ಲದ ಕವನ..!


(ನಾ ಬರೆದು ಸೊರಗಿ ಕರಗಿ ಮತ್ತೆ ಬರೆದರೊ ಅದು ಅವಳ ನೆನಪಿನೊಳಗಿನ ಹೊಸ ನೆವನದ ಕವನ......................!)



ಅದು ಅವಳ ಮುಗುಳು ನಗೆ
ಬಾಚಿ ಗೋರುವ ತೆವಲೆನಗೆ.....
ಅಯ್ಯೊ ಅವಳು ನಡೆದರೆ ಸೊಂಟ ಬಳ್ಳಿಯಂತೆ
ಬೆಳ್ಳಿಯಂತೆ ಅವಳ ನಯವಾದ ಪಾದ....

ಮಿಟುಕಿ ಮಿಟುಕಿ ಮಿಂಚುವ ಮಿಂಚುಳ್ಳಿ ಅವಳ ಕಣ್ಣು
ಬೆನ್ನು ತಳುಕಿ ಬಳುಕಿ ಬಾಗಿದ ಬಾಳೆಯಂತೆ
ಮಲ್ಲಿಗೆ ಮುಡಿದರೆ ಸಾಕು ನನಗೆ ಕಿವಿಅಂಚು ಮೊಸುವ ಆಸೆ
ತೆಳ್ಳಗೆ ನಡೆದರೆ ಸಾಕು ಸೊಂಟಕ್ಕೆ ತಾಗಿ ತೊಗುವ ಕೇಶ....

ಪಾದದ ನೆರಳು ನೇರಳೆಯ ಮೈಯ್ಯಂತೆ ನೀಲಿ
ತೇಲಿ ತುಳುಕುವ ಮೈಯ್ಯೆಲ್ಲಾ ಚುಕ್ಕೆ ಇಟ್ಟ ರಂಗೋಲಿ
ಅಂದದೋಕುಳಿ ಕಾಲಿ ಕಾಲಿ ಕೆನ್ನೆಗೆ ಸ್ವಲ್ಪ ನಗುವಿನ ಗಾಳಿ
ಸೀಳಿ ಉಕ್ಕುವ ಅವಳ ಅಂದದ ಅಲೆಗಳ ದಾಳಿ...

ಅಯ್ಯೊ ನನ್ನವಳು ಕೋಗಿಲೆಯಾಗಿ ಹಾಡಿದಾಗ
ನಾನು ಆಸರೆಯಾಗಿ ಮಾಮರವಾಗಬಾರದಿತ್ತೆ..?
ಅಯ್ಯೊ ನನ್ನವಳು ಹೊವಾಗಿ ಅರಳುವಾಗ
ನಾನು ಮುಳ್ಳಾಗಿ ಬೇಲಿಯಾಗಬಾರದಿತ್ತೇ..?

ಅವಳು ಕುಣಿದರೆ ಸಾಕು ಆಗಸವೇ ರಂಗವಾದಂತ್ತಿತ್ತು
ಅವಳ ತೆವಳುವ ಕಂಗಳು ತೇಲುವ ಮೋಡದಂತ್ತಿತ್ತು
ತುಟಿ ಚಟಪಟವಾದಾಗ ಅಲೆಗಳೇ ತಬ್ಬಿದಂತ್ತಿತ್ತು..
ಬ್ರಂದಾವನದ ಸೊಬಗಿನೊಳು ಅವಳು ಸರ್ಗದಾ ಅಪ್ಸರೆ...

ಅಯ್ಯೊ ನನಗಿಲ್ಲವೇ ನನ್ನವಳ ಮನದ ಮಂದಿರದ ನೆರಳು..
ಕೇಶದಿಂದ ಹಿಡಿದು.... ಅವಳ ಲಿಪ್ ಸ್ಟಿಕ್ ಕೊಡಾ ಗೋಡೌನ್ನಲ್ಲಿ ಭದ್ರವಾಗಿದೆ..
ಎಲ್ಲವೊ ಸುಭದ್ರವಾಗಿದ್ದರೊ...ಮನದಲ್ಲಿ ನನ್ನವಲು ಕಳವಾದಂತಿದೆ..
ನಾನು ಕಟ್ಟಿದ ಪ್ರೇಮದ ಉಸಿರು ನಿಂತಂತಿದೆ..ಕನಸು ಕೊಲೆಯಾದಂತಿದೆ..

ಸೌಂದರ್ಯಕ್ಕೆ ಮರುಳಾಗಿದ್ದು ಮೊರ್ಖತನವೇ...?
ಕಾಣುವ ಅಂದ ವರ್ಣಿಸಿದ್ದು ಹುಚ್ಚುತನವೇ..?
ನಿನಗೆ ಕರುಳಿಲ್ಲವೇ ..ನನಗೆ ನೀ ಎಂದು ಸಿಗುವೆ..?
ತಳ್ಳದಿರು...ಇಲ್ಲವೆನ್ನದಿರು...ನಿನಗಾಗಿ ಶತ ಸಂವತ್ಸರ ಕಾಯುವೆ..!
ಹೇ ನನ್ನ ಕನಸಿನ ರಾಣಿ ನಿನಗೆ ನನ್ನಲ್ಲಿ ಮುನಿಸು ತರವೇ...?????







Tuesday, February 15, 2011

ನೀನು ಬೆಚ್ಚಗಿದ್ದೆ,ನಾನು ಬೆಚ್ಚಗಿರಿಸಿ ಹುಚ್ಚನಾದೆ....!

ಎಲ್ಲೋ ಇತ್ತು ಬಣ್ಣಗಳ ಚಿತ್ತಾರ, ಹೇಗೋ ಇತ್ತು ಚಿತ್ತಾರದ ಅವತಾರ, ಕವನ ಒಂದೇ ಎರಡೇ? ಎಲ್ಲದರಲ್ಲೊ ನಿನ್ನ ನೆನಪುಗಳ ಸಾಲು, ನಿನ್ನ ಹೊಳೆಯುವ ಕಣ್ಣು, ನಿನ್ನ ಬಣ್ಣದ ದೇಹ, ವರ್ಣಿಸಿದಷ್ಟೊ ಸಾಲದು, ಹೇಗಿತ್ತು ಮೊದಲ ದಿನದ ಬೇಟಿ? ಒಮ್ಮೆ ನೆನಪಿಸಿಕೋ ನೀನು ಕೊಡೆ ಇದ್ದರೊ ಅದರ ತೊತುಗಳಿಂದ ತೊಟ್ಟಿಕ್ಕುವ ಹನಿಗೆ ಒದ್ದೆಯಾದಾಗ ನಾನು ನನ್ನ ರೈನ್ ಕೋಟ್ ಕೊಟ್ಟಿದ್ದು, ನೀನು ನೀರ ಹನಿಗಳ ನೋಡು ನೋಡುತ್ತಲೇ ಆನಂದಿಸಿದೆ, ನಾನು ಹನಿಗಳಿಂದ ನೆನೆ ನೆನೆದು ಆನಂದಿಸಿದೆ, ನಿನಗೆ ಆನಂದದ ಬೆಸುಗೆ ನನಗೆ ಸ್ವಲ್ಪ ಜ್ವರ ಬಂದಿತ್ತು ಅಷ್ಟೆ, ನೋವಿನಲ್ಲೊ ನಿನ್ನ ನಗು ನೆನಪಿಸಿದಾಗ ಮೈ ಜುಮ್ಮೆಂದಿತ್ತು, ಸುಕ ತುಳುಕುತ್ತಿತ್ತು ಎಲ್ಲಾ ಆ ನೆನಪುಗಳ ಕನಸಿನಿಂದಷ್ಟೆ! ಬಾಲ್ಯದಿಂದಲೊ ಜೊತೆಗಿದ್ದೆ, ಆ ಆಟ, ಆ ತುಂಟತನ ನನ್ನಲ್ಲೊ ಗೀಜಗನ ಗೊಡಾಗಿತ್ತು. ನೀನು ನವಿಲು ಗರಿ ಬೇಕು ಎಂದು ಹಟಮಾಡಿದ ಆ ವಯಸ್ಸು , ಆ ಸಮಯ ಮಲ್ಲಿಗೆಯ ತೋಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸಿದಂತಿತ್ತು, ನಿನಗೊ ಸ್ವಲ್ಪ ವಯಸ್ಸಾದಾಗ , ಮಾತಿನ ವರಸೆಗಳೇ ಬದಲಾಗಿತ್ತು, ಯಾರೋ ನಿನ್ನನ್ನು ಮುಟ್ಟಿದಾಗ ಅದರ ಭಾವನೆಯನ್ನು ನಾನು ಅರ್ಥೈಸಲೇ ಇಲ್ಲ, ಅದೇನೊ ನನ್ನ ದೇಹಗಳೇ ಕಂಪಿಸಿತ್ತು , ಕಿಚ್ಚೋ, ಮತ್ಸರವೋ ಗೊತ್ತಿಲ್ಲ ನೀನು ನನ್ನ ಆಸ್ತಿ ಅನ್ನುವುದಷ್ಟೆ ಆ ಕಂಪನದ ಸಾರಾಂಶ. ಅಡಿಕೆಯ ಗರಿಯಲ್ಲಿ ನಿನ್ನ ಎಳೆದುಕೊಂಡು ಹೋದಾಗ ನಾನು ಬಿದ್ದರೊ ನಿನಗೆ ನಗು ತಡೆಯಲಾಗಲಿಲ್ಲ, ನನ್ನ ಕೈ ಅಂಚಿನಲ್ಲಿ ಸ್ವಲ್ಪ ರಕ್ತ ಸೋರಿದಾಗ ನೀ ಅತ್ತಿದ್ದು ನಾ ಮರೆತಿಲ್ಲ, ಎಟುಕದ ನೆಲ್ಲಿಕಾಯಿಗೆ ಹೆಗಲ ಮೇಲೆ ಕೊರಿಸಿ ಎಟುಕಿಸಿದ್ದೆ ಅಲ್ಲಿ ನೆಲ್ಲಿಕಾಯಿಯ ಯಜಮಾನಿ ಅಟ್ಟಿಸಿಕೊಂಡು ಬಂದಿದ್ದು ಎಲ್ಲವೊ ಈಗ ಕವನದ ಸಾಲುಗಳಿಗಷ್ಟೇ ಸೀಮಿತ, ನೀನು ವೇದಿಕೆಯಲ್ಲಿ ಹಾಡಿದ ಮೊದಲು ನನ್ನಲ್ಲೇ ಬಂದು ಹೇಗೆ ಹಾಡಿದೆ ಎಂದಾಗ ಉಸಿರಾಟವೇ ನಿಂತ ಹಾಗಿತ್ತು, ಆದರೊ ತಮಾಷೆಗೆ ಪ್ರೀತಿಯೇ ಚನ್ನಾಗಿ ಹಾಡಿದ್ಲು ಅಂದಾಗ ನೀನು ಇಡೀ ರಾತ್ರಿ ಅತ್ತಿದ್ದೆ ಅನ್ನೊದು ಮೊರು ದಿನಗಳ ನಂತರದ ಬೇಟಿಯಲ್ಲಿ ಅರ್ಥವಾಗಿತ್ತು. ಎಲ್ಲರೊ ಸ್ನೇಹದಲ್ಲಿ ಇರಬಹುದು ಆದರೆ ನಮ್ಮ ಸ್ನೇಹದ ಬದುಕು ನನಗೇನೋ ವರ್ಣಿಸಲಾಗದು ಅನ್ನುವಷ್ಟಿತ್ತು, ನಾನು ನಿನ್ನಲ್ಲಿ ಯಾವ ಕನಸನ್ನು ಮೊಡಿಸಿದೆನೋ, ನನ್ನ ಯಾವ ನೆರಳು ನಿನಗೆ ಇಷ್ಟವಾಯಿತೋ ನನಗಂತೊ ಗೊತ್ತಿಲ್ಲ, ಆದರೆ ನಿನ್ನ ನಗು, ನಡಿಗೆ , ಮನಸ್ಸು, ಪ್ರತಿ ನೆರಳೊ ನನಗಿಷ್ಟ, ನೀನು ಸ್ವಲ್ಪ ಎತ್ತರವಾದಾಗ ನನ್ನ ಕನಸುಗಳ ಮನೆಯ ಬಾಗಿಲುಗಳೊ ಎತ್ತರವಾಗಿದ್ದು ನನಗೆ ತಿಳಿಯಲೇ ಇಲ್ಲ, ನೀನು ಮತ್ತೊ ಎತ್ತರವಾದಾಗ ನಿನ್ನ ನಡತೆಯ ತಂತಿ ಮತ್ತೊಬ್ಬರಿಂದ ಮೀಟಲ್ಪಡುತ್ತದೆ ಅನ್ನೋದು ನಾನು ಕಣ್ಣಿಂದ ನಂಬಲಾಗದ ಸತ್ಯ, ಅಂಗಾಗಗಳೊ ಅದು ನೀನಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿತ್ತು, ಆದರೆ ಮನಸ್ಸು ಮಾತ್ರ ನಿನ್ನ ನಗುವನ್ನು ಕಂಡುಹಿಡಿಯುವಲ್ಲಿ ಸೋಲಲಿಲ್ಲ, ನಾನು ನನ್ನದು ಎಂದಿದ್ದ ನಿನ್ನ ಕೈ ಪರರನ್ನು ಎಳೆದುಕೊಂಡು ಬರುವಾಗಲೇ ತಿಳಿದಿತ್ತು ನೀನು ನನ್ನವಳಲ್ಲ ಅನ್ನೋದು, ನಿಂತಲ್ಲೇ ನಿಮ್ಮಿಬ್ಬರನ್ನು ಹಾರೈಸಿದೆ ಸುಖವಾಗಿರಿ ಎಂದು. ನನ್ನ ಮನದಲ್ಲಿ ಬತ್ತಿದ ಬಾವಿಯ ಕಥೆಯನ್ನು ನನ್ನ ಸಹೋದರಿಯಲ್ಲಿ ಬಿತ್ತುತ್ತಿದ್ದೆ, ನನ್ನವಳಾದ ನೀನು ವಿವಾಹವಾಗಿ ಸುಖವಾಗಿದ್ದಿ ಅನ್ನೊ ಪದಕ್ಕೆ ಸಹೋದರಿಯ ಕಣ್ಣುಗಳಲ್ಲಿ ವಿಶೇಷವಾದ ಉದ್ವೇಗ ವ್ಯಕ್ತವಾಗಿತ್ತು, ಇಲ್ಲ ಆಕೆಗೆ ಮದುವೆಯಾಗಿಲ್ಲ ಅಂದಾಗ ನಾನು ನೋಡಿದ್ದು ಕನಸು ಎಂದು ಸುಮ್ಮನಾದೆ,
ಆದರೆ ನಿನ್ನ ನನ್ನ ಮತ್ತೊಂದು ಬೇಟಿ ಕಾಲದೊಳಗಿನ ಬದುಕು ಹೊವನ್ನೊ ಮುಳ್ಳಾಗಿಸುತ್ತದೆ ಅನ್ನುವುದನ್ನು ನನಗೆ ನಿನ್ನ ಮೊಲಕ ತೋರಿಸಿಕೊಟ್ಟಿದೆ. ಹೇಗಿರುವುದೆಲ್ಲ ಹೇಗಾಗುತ್ತದೆ, ಬಾಳಿನಲ್ಲಿ ಬೆತ್ತಲೆಯಿದ್ದಾಗ ಅದು ಬಾಲ್ಯ, ಬಾಲ್ಯದ ನಂತರವೊ ಬೆತ್ತಲೆಯಾದರೆ......?

Thursday, January 13, 2011

ಮೌನ ಮನಸ್ಸು........

ಬಾಲ್ಯದ ಬಾಳು....ಕುಡ್ಲನ ಗೋಳು...
ಮೊರು ನಿಮಿಷಗಳ ಕವನ...........ಎರ್ರಾ ಬಿರ್ರಿ ಮೌನ ಮನಸ್ಸಿನ ಚುಂಬನ..

ಕನಸ್ಸೆಂಬ ಹಳ್ಳದಲ್ಲಿ...ಹೊಲಸ್ಸೆಂಬ ಕೆಸರಿನಲಿ..
ಕುಸುರಿ ಕುಮಿರಿದ್ದ ಬಾಲ್ಯದ ಬುಗ್ಗೆಯಲಿ..
ನಾರಿ ನಾರುತ್ತಿತ್ತು... ಮನದ ಬುಗರಿ ಗರಗರಿದಿತ್ತು..
ಅದಾಗ ವಯಸ್ಸಿಗೆ ತಕ್ಕ ಕನಸ್ಸು... ಅರ್ಥವಿಲ್ಲ ಪರ್ಥವಿಲ್ಲ
ಸಿಂಬಳ ಜಾರುತ್ತಿತ್ತು... ನಾಲಗೆ ನೇವರಿಸಿತ್ತು..
ಗಾದೆಯಲ್ಲ,,,ಬಾದೆಯಿಲ್ಲ..ಬಾಲ್ಯವೊಂದು ಮೌನಮನಸ್ಸು...

ಮುಂಜಾನೆ ಕಾಟಾಚಾರಕ್ಕೆ ಹಲ್ಲುಜ್ಜಿ ಅರೇಬರೆ ಸ್ನಾನ..
ಬೆತ್ತಲೆ ಇದ್ದರೊ ಹೆದರಲಿಲ್ಲ..
ನೋಡಿ ನಗುವರೆಂಬ ಬಯವಿಲ್ಲ..
ಒತ್ತಾಯಕ್ಕೆ ಎರಡು ದೋಸೆ,,,
ಹಸಿವಿಲ್ಲದಿದ್ದರೊ ಹಟಕ್ಕೆ ಇನ್ನೊಂದು ಬೇಕಿತ್ತು..
ಗೆದ್ದು ತಿನ್ನುವ ಬದಲು ಕದ್ದು ತಿಂದರೆ ಹೊಟ್ಟೆ ತುಂಬಿದ ಅನುಭವ..

ಅಂಗನವಾಡಿಗೆ ಹರಿದ ಜೋಳಿಗೆ ಒಡೆದ ಸ್ಲೇಟು...
ಚಡ್ಡಿಯಲ್ಲಿ ಮುರಿದು ನೊರಾಗಿದ್ದ ಕಡ್ಡಿ....
ಬೆಲ್ಲದ ಮುಚ್ಚಳದಲ್ಲಿ ಈಚಲ ಗರಿಯಿಂದ
ಕಿರಕಿರನೆ ತಿರುಗುವ ಗಾಡಿಯಲ್ಲೇ
ಅಂಗನವಾಡಿಗೆ ಮೌನ ಮನಸ್ಸಿನ ಪಯಣ

ಅದು ಬರೆಯಲೂ ತೋಚದ ಅಶ್ವತ್ಥಪುರದ ಅಂಗನವಾಡಿ..
ಸುತ್ತಲೂ ಕಮಿನಿಸ್ಟ್ ಪೊದೆ..
ಗಂಟೆ ಹತ್ತಾದರೆ ಪೊದೆಗೆದೆ ಕೊಟ್ಟು ಸಾರ್ವಜನಿಕ ಸೂ...ಸೂ
ಎತ್ತಿ ಏರಿಸಿದರೆ .... ನೆತ್ತಿ ಬೇರುತ್ತಿತ್ತು...
ಮೌನ ಮನಸ್ಸಿನ ಜೋಳಿಗೆಯಲ್ಲಿ ಮರಿಯಾದೆಯ ಬಣ್ಣವೇ ಇರಲಿಲ್ಲ..

ಬೆತ್ತಕ್ಕೆ ಹೆದರಿ.... ೧..೨..೩...೪... ಅ ಆ ಇ ಈ ಗೆ ಗಂಟೆ ಹನ್ನೆರಡಾಗಿತ್ತು..
ಸಜ್ಜಿಗೆ ಉಂಡೆಗೆ ಕಾದರೊ ಸುಮ್ಮನೆ ತಿಂದರೆ ಸಾಕಿಲ್ಲ..
ಮೊತಿಗೆ ಮೆತ್ತಿ ಪೋಸುಕೊಡಬೇಕಿತ್ತು...
ಒಂದೇ ಅಂಗಿ.... ನೋರೆಂಟು ಹೊಲಿಗೆ...
ಹುಕ್ಕಿಲ್ಲದ ಚಡ್ಡಿ ಸದಾ ಕೈಯ್ಯ ದಾಸತನದಲ್ಲಿತ್ತು...

ಗಂಟಲು ಒಣಗಿದರೆ ಸುಮ್ಮನೆ ನೀರು ಕುಡಿಯಲಿಲ್ಲ
ಬಟ್ಟೆ ಒದ್ದೆಯಾಗದಿದ್ದರೆ ಮನಸ್ಸಿಗೆ ಸಮ್ಮತಿ ಇಲ್ಲ...
ಉರಿವ ಬಿಸಿಲಿನಲ್ಲೇ ಕುಣಿದಾಡುತ್ತಿದ್ದೆ...
ಬೆವರು ಕಿತ್ತು ಘಂದವಾಗಿತ್ತು..!
ಮಧ್ಯೆ ಹೆಬ್ಬೆರಳಲ್ಲಿ ಎಳೆಯೊದರಲ್ಲೂ ಒಂದು ಗತ್ತು..!

ವಯಸ್ಸು ಐದಾದಾಗ ದೊಡ್ಡ ಶಾಲೆಗೆ ಹೋಗೊ ಹುಮ್ಮಸ್ಸು...
ಅದು ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆ ಅಶ್ವತ್ಥಪುರ...
ಗೇಟಿನ ಎರಡೊ ಇಕ್ಕೆಲದಲ್ಲಿ ಗಾಳೀ ಮರ..
ಪಕ್ಕದಲ್ಲಿ ಬಾವಿ.... ಈಚಲ ತೋಪು...

ಕಾಣುವಂತೆ ಕಾಣದಂತೆ ಒಂದು ಜೋಪಡಿ
ಅದು ಅಣ್ಣಿ ಶೆಟ್ಟರ ಗೂಡಂಗಡಿ...
ಗ್ಲಾಸಿನ ತುಂಬ ಅನ್ನಾರಕಲ್ಲಿ... ನೀರೊರಿಸುವ ಪೆಪ್ಪರ ಮಿಠಾಯಿ..
ಬಾಳೇ ಗೊನೆಯಂತೆ ಹಳದಿ ಬೋಟಿ
ಕೈಯಲ್ಲಿ ಸಿಕ್ಕಿಸಿದರೆ ಅದರ ರುಚಿಗಿಲ್ಲ ಸಾಟಿ....

ಗಂಟೆ ಬಡಿಯಲು ಒಂದು ತುಂಡು ರೈಲು ಕಂಬಿ
ನಾನು ಬಡಿಯುತ್ತೇನೆಂದು ಹಟ ಹಿಡಿದಿದ್ದೆ..
ಎಟುಕಿಸಿದರೆ ಬಡಿ ಎಂದು ಟೀಚರ್ ನಕ್ಕಿದ್ದರು
ನಗು ನೋಡಿ ಸ್ನೇಹಿತನ ಹೆಗಲು ಹತ್ತಿ ಹೊಡೆದೆ
ಗಂಟೆ ತಂತಿ ಸಡಿಲಾಗಿ ತಲೆಗೆ ಉರುಳಿತ್ತು.....

ಪಿಜಿನ ಎಂಬವನು ನಮ್ಮ ಊರಿನ ಬುಟ್ಟಿ ನೇಯುವಾತ
ಶಾಲಾ ಅಂಗಳದಲ್ಲೇ ಅವನ ಬಹುದಿನಗಳ ವಾಸ
ವಿದಿಗೆ ಶರಣಾಗಿ ಅಂಗಳದಲ್ಲೇ ಪ್ರಾಣ ಬಿಟ್ಟಿದ್ದ..
ದೆವ್ವವಾಗಿದ್ದಾನೆಂದು ಭಯದ ಆಯುದ ಹಿಡಿದೆ
ನಂತರ ಹುಡುಗಿಯರ ಬುತ್ತಿಯೊ ನನ್ನದೆ...!

ಮೊದಲ ತರಗತಿ ಕನ್ನಡವಾಗಿತ್ತು...
ಮೌನಮನಸ್ಸು ಮೌನವಾಗಿತ್ತು..ತುಂಟಾಟಿಕೆ ಮೊಕವಾಗಿತ್ತು..
ನಗು ನಗುತ್ತಾ ಬಂದರು ಪ್ರಮಿಳಾ ಟೀಚರ್...
ಅಂಗಿ ಗುಂಡಿ ಮೇಲೆ ಕೆಳಗಿದ್ದರೊ......
ದೇಹ ಮಣ್ಣು ಮೆತ್ತಿದ್ದರೊ... ಅಲ್ಲಿಲ್ಲಿ ಗಾಯದ ಅಚ್ಚಿದ್ದರೊ..
ಎತ್ತಿ ಮುದ್ದಾಡಿದ್ದು...ಮರೆಯಲಾಗದ ಕ್ಷಣ...
ಅಂದು ಹಾಡಿಸಿದ್ದು..
ನನ್ನ ನವಿಲೆ ನನ್ನ ನವಿಲೆ ಬಾರೆ ಇಲ್ಲಿಗೆ...
ಅಂಕು ಡೊಂಕು ಹೆಜ್ಜೆ ಹಾಕಿ ಹೊರಟೆ ಎಲ್ಲಿಗೆ..

ಗಡಿಯಾರದಲ್ಲಿ ಎರಡೇ ಸಮಯ ಇಷ್ಟವಾಗಿದ್ದು
ಮದ್ಯಾಹ್ನ ಒಂದು...ಸಂಜೆ ನಾಲ್ಕು..
ಒಂದು ಊಟ... ನಾಲ್ಕು ಆಟ...
ಹೊಸ ನೀಳಿ ಬಿಳಿ ಬಟ್ಟೆ ತೆಗಿಸಿದ್ದರು...
ಜಾರು ಬಂಡಿ ಜಾರಿದೆ... ಮೊದಲ ದಿನವೇ ಹಳೆಯದಾಯಿತು
ಚಡ್ಡಿಯಲ್ಲಿ ತೂತಿಲ್ಲದಿದ್ದರೆ ಕನ್ ಫರ್ ಟೇಬಲೇ ಇಲ್ಲ...

ನಾಲ್ಕನೇ ತರಗತಿಯಲ್ಲೊಮ್ಮೆ
ಇನ್ಸ್ ಪೆಕ್ಟರ್ ಬಂದಿದ್ರು...
ಬಡ್ದಿಮಗ ನಾಕ ನಾಕ ಎಷ್ಟು ಅಂತ ಕೇಳಿದ್ದ
ಕನಕ ಇವತ್ತು ರಜಾ ಅಂದಿದ್ದೆ....
ಟೀಚರ್ ಕ್ಲಾಸ್ ತೊಕೊಂಡಾಗ್ಲೆ ಗೊತ್ತಾಗಿದ್ದು ಅವ್ನು ಮಗ್ಗಿ ಕೇಳಿದ್ದು ಅಂತ..

ಐದನೇ ತರಗತಿಯಲ್ಲಿ ಇಂಗ್ಲಿಷ್ ಶುರುವಾಯ್ತು
ಸಂಜೆ ಅಜ್ಜಿಹತ್ರ ಟಸ್ಕ್ ಪುಸ್ಕ್ ಅಂದಾಗ ಮಂಕಾಗಿದ್ದರು..
ಮತ್ತೆ ಆರನೇ ತರಗತಿಯಲ್ಲಿ ಶುಚಿತ್ವ ಮಂತ್ರಿಯಾಗಿದ್ದೆ,,,
ತರಗತಿಯೊಳಗೇ ಉಗಿದಾಗ ಕಂತ್ರಿಯಾಗೋದೆ...

ಬಂತು ಮೊದಲ ಸಾರಿ ಸ್ಕೂಲ್ ಡೇ..
ಹೇಗೊ ಕಾಡಿ ಬೇಡಿ ಅವಕಾಶ ಗಿಟ್ಟಿಸಿಕೊಂಡಿದ್ದೆ
ಅಂದು ಸಡಗರವೋ ಸಡಗರ
ನನ್ನ ಕಾಕ ಪೂಕ ನ್ರತ್ಯಕ್ಕೆ ಟೀಚರ್ ಶಬಾಶ್ ಅಂದಿದ್ರು
ಅಂದು ರಾತ್ರಿ ಟೀಚರ್ ಏನೋ ಒಂತರಾ.. ಕನಸಲ್ಲೇ ಕಾಡಿದ್ರು..

ಏಳನೇ ತರಗತಿ ದೊಡ್ಡ ಶಾಲೆಯ ಅಂತ್ಯ ಘಟ್ಟವಾಗಿತ್ತು..
ಪ್ರೇಮ ಪತ್ರ ಬರೆಯುವ ಧೈರ್ಯ ಮಾಡಿದೆ...
ಆದರೆ ಬರೆದ ಪತ್ರಗಳೀಗೆ ಕಸ್ಟಮರೇ ಇರಲಿಲ್ಲ
ಅಂತಹ ಬಾಗ್ಯ ಯಾರೊ ಪಡೆದು ಬಂದಿಲ್ಲ ಎಂದು ಗೊಣಗುತ್ತಾ
ಸ್ವ ಸಮಾದಾನದೊಡನೆ ಸುಮ್ಮನಾದೆ..

ಅದು ಕೊನೇಯ ದಿನ
ನನ್ನ ಕನಸಿನ ರಾಣಿ ಕೆನ್ನೆ ಮುಟ್ಟಿದ್ದಳು
ರಾಣಿ ಜೊತೆಗೆ ಶಾಲೆ ಬಿಟ್ಟು ಹೋಗಲು ಅಳು ಬಂದಿತ್ತು..
ಅಳು ನೋಡಲಾಗದೆ ನನ್ನವಳು ಅಣ್ಣಾ ಅಂದಳು...!
ಮತ್ತೆ ಶಾಲೆ ಬಿಡಲು ಬೇಸರವಾಗಲಿಲ್ಲ..

ಪೊಟೋ ತೆಗೆಯಲು ಕರೆದಿದ್ದರು
ಈ ವರೆಗೆ ತಲೆ ಬಾಚದಿದ್ದರೊ ಆಗ ಮನಸ್ಸು ಮಾಡಿದ್ದೆ..
ಒಂದರ ಮೇಲೊಂದು ಬೆಂಚು ಪೇರಿಸಿ
ಮೊರು ನಾಲ್ಕು ಬಾರಿ ಕ್ಲಿಕ್ಕಿಸಿದರು..
ಚಿತ್ರದಲ್ಲಿ ನನ್ನ ಕೈ ಟೀಚರ್ ಹೆಗಲಲ್ಲಿತ್ತು..
ಮಾಸ್ಟರ್ ಬೆತ್ತದೊಡನೆ ಬಂದಾಗ...
ಟೇಚರ್ ಕಾಲು ಹಿಡಿದು ಅಮ್ಮಾ ಆಶೀರ್ವದಿಸಿ ಎಂದು ಅಂತ್ಯ ನೀಡಿದೆ..!

ಬೀಳ್ಕೊಡುಗೆಯ ನಂತರ ಗೇಟು ದಾಟುತ್ತಾ
ಒಮ್ಮೆ ಹಿಂತಿರುಗಿದಾಗ ಎಲ್ಲಾ ನೆನಪುಗಳು ಎದೆಗೆ ಚುಚ್ಚಿತ್ತು..
ಮೊಕವಾಗಿತ್ತು ಕನಸ್ಸಿನೊಡಗಿನ ಮೌನ ಮನಸ್ಸಿನ ಗೋಳು
ಮುಗಿದು ಹೋಗಿತ್ತು ನೆನಪಿನೊಳಗಿನ ಬಾಲ್ಯದ ಬಾಳು.....