Tuesday, June 7, 2011

ಮನ ಮಾಧುರ್ಯ ...


ಅಂದ ತುಳುಕುತಿಹುದು ಗಿಣಿಯು ಪಂಜರದೊಳೇಕೆ... ?
ಆಸೆ ಇಲ್ಲವೇ ಗಗನಕೆ ಹಾರಿ ಕುಣಿಯಲು.......!
ಅಂದ ಸೋರಿಹುದು ಕಾಗೆ ಗಗನವ ಬಾಚಿಹುದು
ಕಪ್ಪು ವರ್ಣವೇ ಕಾ ಕಾ ಹಾಡಿಗೆ ಸೌಂದರ್ಯದ ಹೊನಲು..!

ಸೋಲಿನ ಬದುಕು ಸಾಲು ಸಾಲಾಗಿ ಎಲ್ಲೆ ಮೀರಿದರೊ
ಒಂದು ಗೆಲುವಿನ ಏಣಿ ಏರಲು ಕಾಲಿಗೇಕೆ ದಣಿವಾಯಿತು....?
ಮನವು ಮುನಿದಾಗ ಕ್ಷಣದೊಳು ಹರಿದ ಕಣ್ಣೀರು
ಉಸಿರು ನಿಂತಾಗ ಏಕೆ ಬರಿದಾಯಿತು.......!

ಬಂದು ಬಳಗಗಗಳು ಮನೆತನದ ಕವಲುಗಳು
ಮಾತಿನ ಸೋಗೆಗೇಕೆ ಹರಿದು ಚೊರಾಗುವುದು.......?
ನಿನ್ನೆಗಳಲಿ ಪ್ರೀತಿ ಸ್ನೇಹ ಮಧುರ ಬಾಂದವ್ಯದೊಳು ನಗುವಿತ್ತು..!
ನಾಳೆಗಳ ನಾಲಗೆಯಲಿ ನಿನ್ನೆಗಳ ಮೆಲುಕುಗಳೇಕೆ ಶೊನ್ಯ.....?

ಜೋಕಾಲಿಯಂತೆ ಬದುಕು ತೊಗಿದರೆ ಮುಂದೆ ಹಿಂದೆ ಎರಡರ ಅರಿವು
ತೊಗಿದ ದಾರ ಕೊರಿದ ಆಸನ ಕೇವಲ ನೆಪವಷ್ಟೆ...!
ಅಂದು ಅಮ್ಮನ ತುತ್ತು...ಇಂದು ಹೆಂಡ ’ತಿ’ ಯ ಮುತ್ತು
ಪ್ರೀತಿ ಮರೆತು ಸುಕದ ಆಲಿಂಗನವಷ್ಟೆ....!
ಕಮಲಕೆ ನಗುವಿತ್ತು ಬೇರಿಗೆ ನೀರಿತ್ತು...
ಬೇರು ನೀರಿನ ರುಣಕೆ ಕಮಲಕೆ ಕಾಲವಿಲ್ಲ...!

ಸುಖ ಶಾಂತಿ ನೆಮ್ಮದಿ ಕಾಲಕ್ಕೆ ತಾಳಗಳು...
ಪ್ರೀತಿ ಸ್ನೇಹ ನಂಬಿಕೆ ಬದುಕಿನ ಮೌಲ್ಯಗಳು..
ಕಣ್ಣ ಕನಸು ಮನ ಮಾಧುರ್ಯ
ಗಾನದೊಳೇಕೆ ಮಧುರ... ಬಾಳಿನಲೇಕೆ ನಗ್ನ.....?

3 comments:

  1. ಗೆಳಯ ಇರಲಿ
    ತುಸು ಜೀವನ ಪ್ರೀತಿ ...
    ಯಾಕೆ ಇಷ್ಟು ಒಂದು ನೀರಾಸೆ..

    ReplyDelete
  2. ಸುಂದರ ಸಾಲುಗಳು...

    ಅಭಿನಂದನೆಗಳು ಚಂದದ ಕವನಕ್ಕೆ...

    ReplyDelete
  3. ಚನ್ನಾಗಿದೆ ಸಾಲುಗಳು......

    ReplyDelete